ಸುರತ್ಕಲ್: ಚಿತ್ರಾಪುರಕ್ಕೆ ಆಗಮಿಸಲಿರುವ ಅರುಣ್ ಪುತ್ತಿಲ

ಚಿತ್ರಾಪುರಕ್ಕೆ ಆಗಮಿಸಲಿರುವ ಅರುಣ್ ಪುತ್ತಿಲ

ಸುರತ್ಕಲ್ : ಸದ್ಯ ಎಲ್ಲಾ ಕಡೆ ಪುತ್ತಿಲ ಅವರದ್ದೇ ಹವಾ. ಪುತ್ತೂರಿನಲ್ಲಿ ಇತಿಹಾಸ ನಿರ್ಮಿಸಿ ಸರಳ, ಸಜ್ಜನಿಕೆಯಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ ಅರುಣ್ ಪುತ್ತಿಲ ಅವರು ಚಿತ್ರಾಪುರಕ್ಕೆ ಆಗಮಿಸಲಿದ್ದಾರೆ.

ಮೇ 29.ರಂದು ಸೋಮವಾರ ಬೆಳಗ್ಗೆ 9.00ಕ್ಕೆ ಅರುಣ್ ಕುಮಾರ್ ಪುತ್ತಿಲ ಇವರು ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಭೇಟಿ ನೀಡಿ ಶ್ರೀ ಕೃಷ್ಣ ಭಜನಾ ಮಂದಿರ ತಣ್ಣೀರುಬಾವಿ ಇದರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಇವರ ಆಗಮನಕ್ಕೆ ಪುತ್ತಿಲ ಬ್ರಿಗೇಡ್ ಸುರತ್ಕಲ್ ಸೇರಿದಂತೆ ಹಲವರು ಸ್ವಾಗತ ಕೋರಿದ್ದಾರೆ.