ಚಿತ್ರಾಪುರದ ಶ್ರೀ ಕೃಷ್ಣಮುಖ್ಯಪ್ರಾಣ ದೇವರ ಹಾಗೂ ಬಬ್ಬರ್ಯ ಬಂಟ ದೈವದ ಶಿಲಾನ್ಯಾಸ ಕಾರ್ಯಕ್ರಮ

ಗಣ್ಯರ ಸಮ್ಮುಖದಲ್ಲಿ ನೆರವೇರಿದ ಶಿಲಾನ್ಯಾಸ

ಸುರತ್ಕಲ್ : ಚಿತ್ರಾಪುರದ ಕೃಷ್ಣಮುಖ್ಯಪ್ರಾಣ ದೇವರ ಹಾಗೂ ಬಬ್ಬರ್ಯ ಬಂಟ ದೈವದ ಶಿಲಾನ್ಯಾಸ ಕಾರ್ಯಕ್ರಮ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ನಡೆಯಿತು.

ಈ ಶುಭ ಸಂದರ್ಭಕ್ಕೆ ಶ್ರೀ ಕ್ಷೇತ್ರ ಚಿತ್ರಾಪುರ ಮಠದ ಶ್ರೀ ವಿದ್ಯೆಂದ್ರತೀರ್ಥ ಶ್ರೀಪಾದಂಗಳವರು, ಶಾಸಕ ಭರತ್‌ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಇದರ ಅಧ್ಯಕ್ಷ ಮೋಹನ್ ಆಳ್ವ, ಅರುಣ್ ಕುಮಾರ್ ಪುತ್ತಿಲ, ದ.ಕ. ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಇದರ ಅಧ್ಯಕ್ಷೆ ಜಯ.ಸಿ ಕೋಟ್ಯಾನ್ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.

ಶ್ರೀ ಕೃಷ್ಣ ಭಜನಾ ಮಂದಿರದ ಶಿಲಾನ್ಯಾಸ ಸೇರಿದಂತೆ ಬಬ್ಬರ್ಯ ಬಂಟ ದೈವದ ಶಿಲಾನ್ಯಾಸ, ಮುಖ್ಯಪ್ರಾಣ ದೇವರ ಶಿಲಾನ್ಯಾಸವು ಗಣ್ಯರ ಸಮ್ಮುಖದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪುತ್ತಿಲ ಬ್ರಿಗೇಡ್ ಸುರತ್ಕಲ್ ಇದರ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.