ಗೊಳ್ತಾಮಜಲು: ವಿಹಿಂಪ ಬಜರಂಗದಳ ವತಿಯಿಂದ ರಕ್ತದಾನ ಶಿಬಿರ

ದಿ| ಯತಿರಾಜ್ ದಿ| ಯತೀಶ್ ಕುಮಾರ್ ದಿ| ಜಗದೀಶ್ ಇವರ ಸವಿನೆನಪಿಗಾಗಿ ಯಶಸ್ವಿ ರಕ್ತದಾನ ಶಿಬಿರ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಗೊಳ್ತಾಮಜಲು ಇದರ ಆಶ್ರಯದಲ್ಲಿ ದಿ| ಯತಿರಾಜ್ ದಿ| ಯತೀಶ್ ಕುಮಾರ್ ದಿ| ಜಗದೀಶ್ ಇವರ ಸವಿನೆನಪಿಗಾಗಿ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮತ್ತು ಶ್ರೀ ಗಣೇಶಮಂದಿರ ಗೊಳ್ತಾಮಜಲು ಇವರ ಜಂಟಿ ಆಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆದಿದೆ.

ಈ ಕಾರ್ಯಕ್ರಮದಲ್ಲಿ ಅಪೇಕ್ಷೆಗೂ ಮೀರಿ 208 ಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿದ್ದಾರೆ. ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲಾ ರಕ್ತದಾನಿಗಳಿಗೆ ಕಾರ್ಯಕರ್ತ ಬಂಧುಗಳಿಗೆ ಮತ್ತು ಕೆ. ಎಂ. ಸಿ ಸಿಬ್ಬಂದಿ ವರ್ಗಕ್ಕೂ ವಿಶ್ವಹಿಂದೂ ಪರಿಷತ್ ಬಜರಂಗದಳ ಗೊಳ್ತಾಮಜಲು ಮತ್ತು ಶ್ರೀ ಗಣೇಶ್ ಮಂದಿರ ಗೊಳ್ತಾಮಜಲು ಇವರು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.