ಹಿಂದೂ ಮುಖಂಡ ಅಕ್ಷಯ್ ರಜಪೂತ್ ಗೆ ಗಡಿಪಾರು ನೋಟಿಸ್.!

ಹಿಂದೂ ಮುಖಂಡ ಅಕ್ಷಯ್ ರಜಪೂತ್ ಗೆ ಗಡಿಪಾರು ನೋಟಿಸ್ ಜಾರಿ

ಮಂಗಳೂರು: ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ವ್ಯಾಪಾರ ನಡೆಸಿಕೊಂಡಿರುವ ಹಾಗೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಹಿಂದೂ ಮುಖಂಡ ಅಕ್ಷಯ್ ರಜಪೂತ್ ಇವರಿಗೆ ಗಡಿಪಾರು ನೋಟಿಸ್ ಜಾರಿ ಮಾಡಿದೆ.

ಕರ್ನಾಟಕ ಪೊಲೀಸ್ ಕಾಯ್ದೆ 1963 ಕಲಂ 55(ಎ) ಮತ್ತು (ಬಿ) ರಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲು ಪೊಲೀಸ್ ಉಪ ಅಧೀಕ್ಷಕರು, ಬಂಟ್ವಾಳ: ಉಪ ವಿಭಾಗ ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.

ಕೋಮು ಸೌಹಾರ್ಧತೆ ಕದಡುವ ಪ್ರಕರಣಗಳಲ್ಲಿ ಭಾಗಿಯಾಗಲು ಮುಂದಾಗಿದ್ದು ಇವರ ಚಟುವಟಿಕೆ ನಿಯಂತ್ರಿಸದೆ ಹೋದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವು0ಟಾಗುವುದಲ್ಲದೇ ಅವರ ಜೀವ ಮತ್ತು ಸೊತ್ತಿಗೆ ಯಾವುದೇ ರಕ್ಷಣೆ ಇಲ್ಲದೇ ಸಮಾಜದಲ್ಲಿ ಶಾಂತಿ ನೆಮ್ಮದಿಗೆ ಧಕ್ಕೆಯನ್ನುಂಟು ಮಾಡುವಂತಹ ಸಾಧ್ಯತೆಗಳಿದೆ ಎಂದು ಪೊಲೀಸ್ ಇಲಾಖೆ ವರದಿಯಿಂದ ತಿಳಿಸಿದ್ದಾರೆ. 

ಇವರನ್ನು ಗಡಿಪಾರು ಮಾಡಿ ಎಂದು  ಬಂಟ್ವಾಳ ಠಾಣೆಯ ಪೊಲೀಸ್ ಉಪ ಅಧೀಕ್ಷರಕರು ಪ್ರಸ್ತಾವನೆ ಸಲ್ಲಿಸಿದರಿಂದ ದಿನಾಂಕ 9.10.2023 ರಂದು ಸಹಾಯಕ ಆಯುಕ್ತರ ನ್ಯಾಯಾಲಯ ಮಂಗಳೂರು ಉಪವಿಭಾಗ ಇಲ್ಲಿಗೆ ಹಾಜರಾಗುವಂತೆ ಅಕ್ಷಯ್ ರಜಪೂತ್‌ಗೆ ನೋಟೀಸ್ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಸದ್ಯ ಅಕ್ಷಯ್ ರಜಪೂತ್ ಅವರಿಗೆ ಗಡಿಪಾರು ನೋಟೀಸು ಬಂದಿದ್ದು, ಮುಂದಿನ ಬೆಳವಣಿಗೆ ಏನು ಎಂಬುದು ತಿಳಿದುಬರಬೇಕಿದೆ.