ಉದ್ಯಾವರ ಸೇತುವೆಯಲ್ಲಿ ಸ್ಕೂಟರ್ ಬಿಟ್ಟು ಯುವಕ ನಾಪತ್ತೆ: ನದಿಗೆ ಹಾರಿರುವ ಶಂಕೆ.!

ಯುವಕ ನದಿಗೆ ಹಾರಿ ಆತ್ಮಹತ್ಯೆ ಶಂಕೆ - ಮೀನುಗಾರರಿಂದ ಹುಡುಕಾಟ

ಉಡುಪಿ : ಉಡುಪಿಗೆ ಸಮೀಪದ ಉದ್ಯಾವರ ನದಿಗೆ ಯುವಕನೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ನದಿಯಲ್ಲಿ ಯುವಕನಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ಯುವಕ,ಉಡುಪಿಯ ಖಾಸಗಿ ಎಲೆಕ್ಟ್ರಾನಿಕ್ ಸಂಸ್ಥೆಯೊಂದರ ಉದ್ಯೋಗಿ ಎನ್ನಲಾಗಿದೆ.ಈತ ಉದ್ಯಾವರ ಸೇತುವೆ ಮೇಲಿಂದ ಹಾರಿರುವ ಸಾಧ್ಯತೆ ಇದ್ದು, ಸ್ಥಳದಲ್ಲಿ ಸ್ಕೂಟಿ ಮತ್ತುವ ಚಪ್ಪಲಿ ದೊರೆತಿದೆ. ಸ್ಥಳೀಯ ಮೀನುಗಾರರ ಸಹಾಯದಿಂದ ದೋಣಿಯಲ್ಲಿ ಹುಡುಕಾಟ ನಡೆಯುತ್ತಿದ್ದು,ಕಾಪು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.