ಮಂಗಳೂರು : ಸೇವೆಯ ಪರಮೋ ಧರ್ಮಃ ಎಂಬ ಗುರಿಯನ್ನು ಇಟ್ಟುಕೊಂಡು ಸ್ಥಾಪನೆಯಾದ "ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಮಂಗಳೂರು" ಸೇವಾ ಸಂಸ್ಥೆಯು ತನ್ನ ಮಾಸಿಕ ಹಾಗೂ ತುರ್ತು ಸೇವಾ ಕಾರ್ಯ ಧಾರ್ಮಿಕ ಶೈಕ್ಷಣಿಕ ವಿವಿಧ ಹಲವಾರು ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡು, ಬದ ಕುಟುಂಬಗಳಿಗೆ ನೆರವಾಗಿ ಪ್ರಚಾರದ ಹಂಗಿಲ್ಲದೆ ಸಮಾಜ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬಂದಿದೆ.
ತನ್ನ ಸೇವಾ ಪಯಣದಲ್ಲಿ 62 ಮಾಸಿಕ ಸೇವಾ ಯೋಜನೆಯ ಮೂಲಕ 27 ತುರ್ತು ಯೋಜನೆಯೊಂದಿಗೆ 136 ಕುಟುಂಬಗಳಿಗೆ 40,15,000ರೂ ಸಹಾಯಧನ ಮಾಡಿದೆ.
ಕುಟುಂಬ 2 - ಸುಂದರ್ ಪೂಜಾರಿ
ಸಿದ್ಧಕಟ್ಟೆ ಸಮೀಪದ ಕುದ್ಕೋಳಿ ನಿವಾಸಿ ಸುಂದರ್ ಪೂಜಾರಿ ಇವರು ಇತ್ತೀಚಿಗೆ ಮೆಸ್ಕಾಂ ಕೆಲಸ ಮಾಡುತಿರುವಾಗ ಕಂಬದಿಂದ ಬಿದ್ದು ಕೈ ಗೆ ಏಟು ಬಿದ್ದು ಶಸ್ತ್ರಚಿಕಿತ್ಸೆಗಾಗಿ ಸಾಕಷ್ಟು ಖರ್ಚು ಮಾಡಿ ಆರ್ಥಿಕವಾಗಿ ಸಂಕಷ್ಟದ್ದರು. ಇವರಿಗೆ ಬಜರಂಗದಳ ಸೇವಾ ಬ್ರಿಗೇಡ್ ವತಿಯಿಂದ ತುರ್ತು ಯೋಜನೆಯ ಮೂಲಕ 10,000 ರೂಪಾಯಿಗಳನ್ನು ನೀಡಿದ್ದಾರೆ.
ಡಿಸೆಂಬರ್ ತಿಂಗಳ 62 ಸೇವಾ ಮಾಸಿಕ ಯೋಜನೆ ಯಶಸ್ವಿಯಾಗಿದ್ದು, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಧನ್ಯವಾದಗಳನ್ನು ತಿಳಿಸಿದ್ದಾರೆ.