ಸುರತ್ಕಲ್: ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಉಮೇಶ್ ಟಿ. ಕರ್ಕೇರಾ ಅವರಿಗೆ ಅಭಿನಂದನಾ ಸಮಾರಂಭ

ಸುರತ್ಕಲ್: ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಉಮೇಶ್ ಟಿ. ಕರ್ಕೇರಾ ಅವರಿಗೆ ಅಭಿನಂದನಾ ಸಮಾರಂಭ

ಚಿತ್ರಾಪುರ: ಶ್ರೀ ದೇವಿ ಭಕ್ತ ವೃಂದ ಚಿತ್ರಾಪುರ ಇದರ ವತಿಯಿಂದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀ ಪಾದರು ಚಿತ್ರಾಪುರ ಮಠ ಇವರ ಮಾರ್ಗದರ್ಶನದಲ್ಲಿ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪಡೆದಿರುವ ಉಮೇಶ್ ಟಿ. ಕರ್ಕೇರಾ ಕುಳಾಯಿ ಇವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮ ಚಿತ್ರಾಪುರ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಪೂಜ್ಯ ವಿದ್ಯೇಂದ್ರ ತೀರ್ಥ ಶ್ರೀ ಪಾದರು ಆಶೀರ್ವಚನ ನೀಡಿದರು. ಕಮಲಾದೇವಿ ಪ್ರಸಾದ ಆಸ್ರಣ್ಣ ಹಾಗೂ ಶಾಸಕ ಡಾ. ವೈ ಭರತ್ ಶೆಟ್ಟಿ ಯವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿ, ಶುಭಕೋರಿದರು.