ಮಂಗಳೂರು: ಹೆಂಡತಿ ಸಾವಿನ ಸುದ್ದಿ ಕೇಳಿ ಜೀವಾಂತ್ಯ ಮಾಡಿಕೊಂಡಿ ಗಂಡ.!!

ಆಸ್ಪತ್ರೆಯಲ್ಲಿ ಹೆಂಡತಿಗೆ ಹೃದಯಾಘಾತ, ಸಾವು ; ಜೀವ ತೆಗೆದುಕೊಂಡ ಗಂಡ

ಮಂಗಳೂರು: ಹೃದಯಾಘಾತದಿಂದ ಪತ್ನಿ ಮೃತಪಟ್ಟಿರುವುದನ್ನ ಅರಗಿಸಿಕೊಳ್ಳದ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಕೊಣಾಜೆಯಲ್ಲಿ‌ ನಡೆದಿದೆ.

ಕೊಣಾಜೆ ಗ್ರಾಮ ಚಾವಡಿ ನಿವಾಸಿಗಳಾದ ಸೇಸಪ್ಪ ಪೂಜಾರಿ (60) ಆತ್ಮಹತ್ಯೆ ಮಾಡಿಕೊಂಡವರು. ಪತ್ನಿ ಮೀನಾಕ್ಷಿ (55) ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಎಲ್ಲ ಗುಣಮುಖರಾಗಿದ್ದರು. ಆದರೆ ಎರಡು ದಿನಗಳ ಹಿಂದೆ ಮತ್ತೆ ಹೃದಯಾಘಾತವಾಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರ ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದ ಕಾರಣ ಪತ್ನಿ ಸಾವನ್ನಪ್ಪಿದ್ದರು.

ಪತ್ನಿ ಸಾವನ್ನಪ್ಪಿರುವ ವಿಷಯ ತಿಳಿಯುತ್ತಿದ್ದಂತೆ ನೋವಿಗೆ ಒಳಗಾದ ಗಂಡ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಶಾಲಾ ಬಸ್​ ಡ್ರೈವರ್​ ಆಗಿದ್ದ ಇವರಿಗೆ ಮಕ್ಕಳಿರಲಿಲ್ಲ. ಈ ಕೊರಗು ಅನೇಕ ವರ್ಷಗಳಿಂದ ದಂಪತಿಯನ್ನು ಹೆಚ್ಚು ಕಾಡಿತ್ತು  ಎಂದು ತಿಳಿದುಬಂದಿದೆ.