ಪುತ್ತೂರು: "ಮತ್ತೆ ರಾಜಕೀಯದಲ್ಲಿ ಸಕ್ರಿಯ, ಬಿಜೆಪಿ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸೋಣ" ಎಂದ ರಾಜಾರಾಮ್ ಭಟ್

ಬಿಜೆಪಿ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸೋಣ
ಇನ್ಮುಂದೆ ನಾನು ನಿಮ್ಮೊಂದಿಗೆ ಇರುತ್ತೇನೆ' : ರಾಜಾರಾಮ್ ಭಟ್

ಪುತ್ತೂರು : ಕೆಲ ದಿನಗಳ ಹಿಂದೆ ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿದ್ದ ರಾಜಾರಾಮ್ ಭಟ್ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮೊದಲಿನಂತೆಯೇ ರಾಜಕೀಯದಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣವಾದ ಫೇಸ್ಟುಕ್ ಲೈವ್ ಮೂಲಕ ಮಾತನಾಡಿದ ರಾಜಾರಾಮ್ ಭಟ್ ಅವರು, ಮತ್ತೆ ರಾಜಕೀಯದಲ್ಲಿ ಸಕ್ರಿಯವಾಗುವುದಾಗಿ ತಿಳಿಸಿದರು.

ಕೆಲ ದಿನಗಳ ಹಿಂದೆ ಫೇಸ್ಟುಕ್ ಲೈವ್ ಮೂಲಕ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದೆ, ಆದರೇ ಈ ವಿಚಾರವಾಗಿ ಹಲವಾರು ಮಂದಿ ಕಾರ್ಯಕರ್ತರು, ಸ್ನೇಹಿತರು, ಅಣ್ಣ-ತಮ್ಮಂದಿರು ರಾಜಾರಾಮ್ ಭಟ್ರೇ ನೀವು ನಮ್ಮನ್ನ ಬಿಟ್ಟು ಹೋಗ್ವಾರ್ದು., ನಮ್ಮೊಟ್ಟಿಗೆ ನೀವ್ ಇರ್ಬೇಕು ಎಂದು ಹೇಳಿದ್ದಾರೆ. ಹಾಗಾಗಿ ನನಗೆ ಅವರ ಮನಸ್ಸಿಗೆ ಕಷ್ಟ ಆಗುವ ರೀತಿಯಲ್ಲಿ ನಡೆದುಕೊಳ್ಳಲು ಇಷ್ಟವಿಲ್ಲ. ಯಾಕಂದ್ರೆ ಕಾರ್ಯಕರ್ತರ ಮನಸ್ಸಿಗೆ ನೋವಾಗಿ ಅವರು ನೊಂದ ಹೃದಯದಿಂದ ನಮ್ಮೊಂದಿಗೆ ಗುರುತಿಸಿಕೊಂಡ ವ್ಯವಸ್ಥೆಯೊಳಗೆ ನಾವು ವಿಧಾನ ಸಭಾ ಚುನಾವಣೆ ವೇಳೆ ಸ್ಪರ್ಧಿಸಿದ್ದು, ಆದ ಕಾರಣ ಕಾರ್ಯಕರ್ತರಿಲ್ಲದೆ ನಾಯಕರಿಲ್ಲ., ಕಾರ್ಯಕರ್ತರಿಲ್ಲದೆ ಸಂಘಟನೆ ಇಲ್ಲ., ಕಾರ್ಯಕರ್ತರಿಲ್ಲದೆ ಯಾವ ಪಕ್ಷವೂ ಇಲ್ಲ., ಅದಕ್ಕೆ ಉದಾಹರಣೆ ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯ ಫಲಿತಾಂಶ. ಮನಸ್ಸಿಗೆ ಕಷ್ಟವಾಗಿ ನಾನು ರಾಜಕೀಯ ನಿವೃತ್ತಿ ಪಡೆದಿಲ್ಲ.

ಪುತ್ತಿಲ ಪರಿವಾರ ಮಾತೃ ಪಕ್ಷವಾದ ಬಿಜೆಪಿ ಜೊತೆ ಸಂಪೂರ್ಣವಾಗಿ ಕೈ ಜೋಡಿಸಿ ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನು ಅಧಿಕ ಬಹುಮತದಿಂದ ಗೆಲ್ಲಿಸುವಂತಹ ಸಂಕಲ್ಪದತ್ತ ಹೊರಟಿದ್ದೇವೆ. ಆ ಕಾರ್ಯದಲ್ಲಿ ಇನ್ಮುಂದೆ ನಾನು ಒಬ್ಬ., ನಾನು ನಿಮ್ಮೊಂದಿಗೆ ಇರುತ್ತೇನೆ' ಎಂದು ಹೇಳಿದರು. ಈ ಮೂಲಕ ಮತ್ತೆ ಸಕ್ರಿಯ ರಾಜಕಾರಣದತ್ತ ರಾಜಾರಾಮ್ ಭಟ್ ಅವರು ಮತ್ತೆ ಹೆಜ್ಜೆಯನ್ನಿಟ್ಟಿದ್ದಾರೆ.