ಮಂಗಳೂರು : ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತನ ಮೇಲೆ ಗೂಂಡಾ ಕಾಯ್ದೆ

ಕಳೆದ ಒಂದು ವರ್ಷದಿಂದ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿ ಇಲ್ಲದೇ ಇದ್ದರೂ ಗೂಂಡಾ ಕಾಯ್ದೆಯಡಿಯಲ್ಲಿ ಜೈಲುಪಾಲು

ಮಂಗಳೂರು : ಕಳೆದ ಒಂದು ವರ್ಷದ ಹಿಂದೆ ವಿಧಾನಸಭಾ ಚುನಾವಣೆ ಸಂಧರ್ಭ ಗಡಿಪಾರು ಶಿಕ್ಷೆಗೆ ಒಳಗಾಗಿದ್ದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತ ಶಕ್ತಿನಗರ ನಿವಾಸಿ ಜೆಪಿ ಜಯಪ್ರಕಾಶ್ ಎಂಬಾತನಿಗೆ ಗೂಂಡಾ ಕಾಯ್ದೆ ಹಾಕಿ ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗಿರುವ ವಿದ್ಯಮಾನ ಹೊರ ಬಿದ್ದಿದೆ. 

 

ಕಳೆದ ಒಂದು, ಒಂದೂವರೆ ವರ್ಷದಿಂದ ಯಾವುದೇ ಒಂದು ಪ್ರಕರಣದಲ್ಲಿ ಕೂಡ ಜಯಪ್ರಕಾಶ್ ಗುರುತಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಹಿಂದೂ ಕಾರ್ಯಕರ್ತ ಆಗಿದ್ದ ಒಂದೇ ಕಾರಣಕ್ಕೆ ಈ ರೀತಿಯ ಹುನ್ನಾರ ನಡೆಯುತ್ತಿದೆಯೇ ಎಂದು ಸಂಘಟನಾ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.