ಉಳ್ಳಾಲ: ಬೈಕ್ ಅಪಘಾತ; ವಿವಾಹಿತೆ ಸಾವು, ಸವಾರ ಗಂಭೀರ

ಉಳ್ಳಾಲ: ಬೈಕ್ ಅಪಘಾತ; ವಿವಾಹಿತೆ ಸಾವು, ಸವಾರ ಗಂಭೀರ

 

ಕೊಣಾಜೆ‌ ಠಾಣಾ ವ್ಯಾಪ್ತಿಯ ನಾಟೆಕಲ್ ಸಮೀಪದ ತಿಪ್ಲೆಪದವು ಎಂಬಲ್ಲಿ‌ ರಸ್ತೆ ಡಿವೈಡರ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು, ಸಹ ಸವಾರೆ ಅವರ ಪತ್ನಿ ಮೃತಪಟ್ಟಿರುವ ಘಟನೆ‌ ರವಿವಾರ ಸಂಜೆ ನಡೆದಿದೆ. ಬೋಂದೇಲ್ ನಿವಾಸಿ ಶ್ರೀನಿಧಿ (29) ಮೃತ ದುರ್ದೈವಿ.

ಬೈಕ್‌ ಸವಾರ ಯತೀಶ್‌ (30) ಎಂಬವರು ಗಂಭೀರ ಗಾಯಗೊಂಡಿದ್ದು, ಅವರ ಪತ್ನಿ ನಿಧಿ (29) ಮೃತಪಟ್ಟಿದ್ದಾರೆ.

ಮೃತರು ಹಾಗೂ ಗಾಯಾಳು, ಮುಡಿಪುವಿನಲ್ಲಿನ ಸಂಬಂಧಿಕರ ಗೃಹಪ್ರವೇಶಕ್ಕೆ ತೆರಳಿ ವಾಪಸ್ಸಾಗುವ ಸಂದರ್ಭ ಬೈಕ್, ಸವಾರನ ನಿಯಂತ್ರಣ ತಪ್ಪಿ ನಾಟೆಕಲ್ ಗ್ರೀನ್ ಗ್ರೌಂಡ್ ಸಮೀಪ ಡಿವೈಡರ್ ಗೆ ಬಡಿದು ಈ ದುರ್ಘಟನೆ ನಡೆದಿದೆ. ಇನ್ನು ಮೃತ ಶ್ರೀನಿಧಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರೆ, ಯತೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.