ಉಡುಪಿ: 6 ಮಂದಿಯ ತಂಡವೊಂದು ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಡುಪಿ ಮಣಿಪಾಲ ಸರಳೆಬೆಟ್ಟು ಪ್ರದೇಶದಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಕುರಿತು ಉಡುಪಿ ಎಸ್ಪಿ ಡಾ.ಅರುಣ್ ಕೆ ಮಾತನಾಡಿ, ಘಟನೆಯಲ್ಲಿ ಭಾಗಿಯಾಗಿರುವ ಎಲ್ಲ ಆರು ಮಂದಿಯನ್ನು ಬಂಧಿಸಲಾಗಿದೆ. ಅವರಲ್ಲಿ ಐವರು ವಯಸ್ಕರು ಮತ್ತು ಒಬ್ಬರು ಅಪ್ರಾಪ್ತರಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಖೆ ನಡೆಸಲಾಗುವುದು ಎಂದರು.
ದೂರುದಾರ ಅರುಷ್ ಕುಮಾರ್, ಮಣಿಪಾಲದ ಬಾರ್ ಅಂಡ್ ರೆಸ್ಟೋರೆಂಟ್ಗೆ ಪ್ರವೇಶಿಸಲು ಸರದಿ ಸಾಲಿನಲ್ಲಿ ನಿಂತಿದ್ದರು. ಆ ಕ್ಷಣದಲ್ಲಿ ಇತರ ಕೆಲವು ಯುವಕರು ಮೊದಲು ರೆಸ್ಟೋರೆಂಟ್ಗೆ ಪ್ರವೇಶಿಸುವುದಾಗಿ ಹೇಳಿ ಕಿಡಿಕಾರಿದರು. ಘಟನೆಯ ನಂತರ ಅರುಷ್ ತನ್ನ ಮನೆಗೆ ಆಟೋದಲ್ಲಿ ಹೋದನು. ನಂತರ ಆತನನ್ನು ಹಿಂಬಾಲಿಸಿ ಆರು ಸದಸ್ಯರು ಥಳಿಸಿದರು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.