ಮಂಗಳೂರು: ಸಿಕ್ಕಿಬಿದ್ದ ಅಂತರ್ ಜಿಲ್ಲಾ ಬೈಕ್ ಕಳ್ಳ.!

ಬಜಪೆ ಪೊಲೀಸರಿಂದ ದ್ವಿಚಕ್ರ ವಾಹನ ಕಳ್ಳನ ಬಂಧನ

ಬಜಪೆ: ದ್ವಿಚಕ್ರ ವಾಹನ ಕಳ್ಳನೋರ್ವನನ್ನು ಬಜಪೆ ಠಾಣೆ  ಪೊಲೀಸರು ಸ್ವಾಮಿಲಪದವು ಎನ್ನುವಲ್ಲಿ ಗುರುವಾರ ಬಂಧಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ಸಾಸ್ತಾನದ ಗೋಳಿಬೆಟ್ಟುಮನೆಯ ಪ್ರಹ್ಲಾದ್‌ (30) ಬಂಧಿತ. 

ಗುರುವಾರದಂದು ಮುಂಜಾನೆ ವಾಹನ ತಪಾಸಣೆ ಮಾಡುತ್ತಿರುವಾಗ ಸ್ಕೂಟರ್‌  ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೆ ಇದ್ದು, ಆಗ ಆತನನ್ನು ಹಿಡಿದು ವಿಚಾರಿಸಿದಾಗ ಸ್ಕೂಟರ್‌ ಬಂಟ್ವಾಳದ ಮೆಲ್ಕಾರ್‌ ಎಂಬಲ್ಲಿಂದ ಕಳವು ಮಾಡಿದಾಗಿ ತಿಳಿಸಿದ್ದ. 

ಸುಮಾರು 1 ಲಕ್ಷ ಮೌಲ್ಯದ ಬೈಕ್ ನ್ನು ವಶಪಡಿಸಿಕೊಂಡಿದ್ದು,ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಆರೋಪಿಯ ವಿರುದ್ದ ಈ ಹಿಂದೆ ಕುಂದಾಪುರ ಮಂಗಳೂರು ಉತ್ತರ, ಕೋಟ,ಬ್ರಹ್ಮಾವರ ಪೊಲೀಸ್, ಉಡುಪಿ ನಗರ ಪೊಲೀಸ್‌ ಠಾಣೆಗಳಲ್ಲಿ ಕಳ್ಳತನಕ್ಕೆ ಹಾಗೂ ಬೈಕ್‌ ಕಳ್ಳತನಕ್ಕೆ ಸಂಬಂದಪಟ್ಟ ಪ್ರಕರಣಗಳು ದಾಖಲಾಗಿದ್ದು,ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಿಸಿಕೊಂಡಿದ್ದ.