ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಾಣೂರು ವಲಯ ಶಿವಾಜಿ ಘಟಕದ ನೇತೃತ್ವದಲ್ಲಿ ಗ್ರಾಮಸ್ಥರಿಂದ ಗೋವಿಗಾಗಿ ಮೇವು ಕಾರ್ಯಕ್ರಮ ನಡೆಯಿತು. ಸ್ಥಳೀಯ ಗೋಶಾಲೆಗಳಿಗೆ ಮೇವುಗಳ ಕೊರತೆ ಇದ್ದು ಗ್ರಾಮಸ್ಥರಿಂದ ಮೇವುಗಳನ್ನು ಸಂಗ್ರಹಿಸಿ ಸ್ಥಳೀಯ ಗೋಶಾಲೆಗಳಿಗೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಖಂಡ ಗೋರಕ್ಷ ಪ್ರಮುಖ್ ಶರತ್ ಸಾಣೂರು, ವಿಶ್ವ ಹಿಂದೂ ಪರಿಷದ್ ಸಾಣೂರು ವಲಯ ಅಧ್ಯಕ್ಷರು ರವಿ ಸಾಣೂರು, ವಲಯ, ಕಾರ್ಯದರ್ಶಿ ರೋಹಿತಶ್ವ ಸಾಣೂರು, ಬಜರಂಗದಳ ವಲಯ ಸಂಚಾಲಕರು ಅಕ್ಷಯ್ ಸಾಣೂರು, ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.