ಮಂಗಳೂರು: ಐಷಾರಾಮಿ ಹಡಗಿನಲ್ಲಿ ಮತ ಜಾಗೃತಿ.!

ಪಣಂಬರೂರಿಗೆ ಆಗಮಿಸಿದ ಐಷರಾಮಿ ಹಡಗು - ಮತ ಜಾಗೃತಿ

ಮಂಗಳೂರು : ನಗರ ಹೊರವಲಯದ ಮಂಗಳೂರು ಬಂದರಿಗೆ ಎಂ.ಎಸ್. ಸೆವೆನ್ಸ್ ನ್ಯಾವಿಗೇಟರ್ ಐಷಾರಾಮಿ ಹಡಗು ಆಗಮಿಸಿದ್ದು, ಪ್ರವಾಸಿಗರಿಗೆ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಗುರುವಾರ ಮತದಾನದ ಜಾಗೃತಿ ಅಭಿಯಾನವನ್ನು ಆಯೋಜಿಸಲಾಯಿತು. 

ದ.ಕ.ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಮುಖ್ಯಸ್ಥರೂ ಆಗಿರುವ ಡಾ. ಆನಂದ್ ಮಾತನಾಡಿ ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಅರ್ಹರು ಮತದಾನದ ಮಹತ್ವ ಅರಿತು ತಪ್ಪದೇ ಹಕ್ಕು ಚಲಾಯಿಸಬೇಕು ಎಂದರು. ಬಂದರು ಮಂಡಳಿಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತವರ ಕುಟುಂಬಸ್ಥರಿಗೆ ಮತದಾನದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿ ಮತದಾನದ ಪ್ರತಿಜ್ಞೆ ಬೋಧಿಸಲಾಯಿತು.