ಕಾರ್ಕಳ: ಅಭಿನವ್ ಭಾರತ್ "ನಮಗಾಗಿ ಮೋದಿ" ಬೃಹತ್ ಕಾಲ್ನಡಿಗೆ ಜಾಥಾ

ಕಾರ್ಕಳದಲ್ಲಿ ಸಿಡಿಲ ಸಂಚಲನ ಸೃಷ್ಟಿಸಿದ ಅಭಿನವ್ ಭಾರತ್ ಕಾರ್ಕಳದ "ನಮಗಾಗಿ ಮೋದಿ" ಕಾರ್ಯಕ್ರಮ

ಕಾರ್ಕಳ : ಕಾರ್ಕಳದಲ್ಲಿ ಸಿಡಿಲ ಸಂಚಲನ ಸೃಷ್ಟಿಸಿದ ಅಭಿನವ್ ಭಾರತ್ ಕಾರ್ಕಳದ "ನಮಗಾಗಿ ಮೋದಿ" ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.

ಪ್ರಧಾನಿ ಮೋದಿಯವರನ್ನು ಬೆಂಬಲಿಸಿ ಕೇರಳದ ಅಪ್ಪಟ ಸನಾತನಿ ಹಿಂದೂ ಸಂತ ಭದ್ರಾನಂದ ಸ್ವಾಮಿಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಈ ಬೃಹತ್ ಕಾಲ್ನಡಿಗೆ ಜಾಥಾ ನಡೆದಿದೆ.

ಅಭಿನವ್ ಭಾರತ್ ಕಾರ್ಕಳದ ಕರೆಗೆ ಓಗೊಟ್ಟು ಧಾವಿಸಿ ಬಂದ ಸಹಸ್ರಾರು ರಾಷ್ಟ್ರ ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಮೋದಿಯವರ ಮುಖವಾಡ ಧರಿಸಿದ 500 ದೇಶಭಕ್ತರಿಂದ ಕಾರ್ಕಳದ ರಥಬೀದಿಯಲ್ಲಿ  ಅಬ್ ಕಿ ಬಾರ್ ಚಾರ್ ಸೌ ಪಾರ್ ( ಈ ಬಾರಿ 400 ರ ಮೇಲೆ ಸೀಟು) ಎಂಬ ಜಯಘೋಷಣೆಯೊಂದಿಗೆ ಕಾರ್ಕಳದ ಶ್ರೀ ಅನಂತ ಪದ್ಮನಾಭ ದೇಗುಲದಿಂದ ಪ್ರಾರಂಭವಾಗಿ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದವರೆಗೆ ಕಾಲ್ನಡಿಗೆ ಜಾಥಾ ಮೂಲಕ ಸಾಗಿ ಬಂದ ಸಾವಿರಾರು ರಾಷ್ಟ್ರ ಭಕ್ತರಿಂದ ನರೇಂದ್ರ ಮೋದಿಜಿಯನ್ನು ಮೂರನೇ ಅವಧಿಗೆ ಪ್ರಧಾನಿ ಮಾಡುವ ಸಂಕಲ್ಪ ಸ್ವೀಕಾರವಾಗಿದೆ.