ಮಂಗಳೂರು: ಭಗತ್ ಸಿಂಗ್ ಆರ್ಮಿ (ರಿ.) ಅಶೋಕನಗರ ಇದರ ವತಿಯಿಂದ "ಶ್ರೀ ದೇವಿ ಮಹಾತ್ಮೆ" ಯಕ್ಷಗಾನ ಬಯಲಾಟ ದಿನಾಂಕ 10-05-2024ನೇ ಶುಕ್ರವಾರ ಉರ್ವ ಮೈದಾನದಲ್ಲಿ ನಡೆಯಲಿದೆ.
ಭಗತ್ ಸಿಂಗ್ ಆರ್ಮಿ (ರಿ.) ಸಂಸ್ಥೆಯು 3ನೇ ವರ್ಷದ ಸಂಭ್ರದಲ್ಲಿದ್ದು, ಶ್ರೀ ಚಾಮುಂಡೇಶ್ವರಿ ಹೊಯ್ಗೆಬೈಲ್, ಉರ್ವ ಇವರ ಆಶೀರ್ವಾದಗಳೊಂದಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರು ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ಆಡಿ ತೋರಿಸಲಿದ್ದಾರೆ.
ಮಧ್ಯಾಹ್ನ 3ಗಂಟೆಗೆ ಸರಿಯಾಗಿ ಶ್ರೀ ಕ್ಷೇತ್ರ ಚಾಮುಂಡೇಶ್ವರಿ ಹೊಯ್ಗೆಬೈಲ್ ನಿಂದ ಭವ್ಯವಾದ ಮೆರವಣಿಗೆ ಹೊರಡಲಿದೆ. ಸಂಜೆ 5.30ಗೆ ಚೌಕಿ ಪೂಜೆ ಹಾಗೂ ರಾತ್ರಿ 7.30 ನಂತರ ಅನ್ನ ಪ್ರಸಾದ ಜರಗಲಿದೆ.ಆ ಪ್ರಯುಕ್ತ ತಾವೆಲ್ಲರೂ ಆಗಮಿಸಿ ಶ್ರೀ ದೇವಿಯ ಸರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಕಟೀಲು ಶ್ರೀ ದುರ್ಗಾಪರೆಮೇಶ್ವರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಭಗತ್ ಸಿಂಗ್ ಆರ್ಮಿ(ರಿ.) ಸಂಸ್ಥೆಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.