ಮಂಗಳೂರು: ಜಿಲ್ಲೆಯಾದ್ಯಂತ ಮಳೆಯ ಮುನ್ನೆಚ್ಚರಿಕೆ ಇದ್ದು ಕುಲಶೇಖರದಿಂದ ಕಾರ್ಕಳ, ಪುಂಜಾಲಕಟ್ಟೆಯಿಂದ ಉಜಿರೆ ಮತ್ತು ಬಿ.ಸಿ.ರೋಡ್ನಿಂದ ಉಪ್ಪಿನಂಗಡಿವರೆಗಿನ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವರಿಗೆ ಬ್ರಿಜೇಶ್ ಚೌಟ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಯವರು ಮಳೆನೀರು ಹರಿದು ಹೋಗಲು NHAI ಸೇರಿದಂತೆ ಸಂಬಂಧಪಟ್ಟ ಎಲ್ಲಾ ಏಜೆನ್ಸಿಗಳು ಪೂರ್ವಭಾವಿಯಾಗಿ ತಯಾರಿಗಳನ್ನು ನಡೆಸುತ್ತಿದೆ ಎಂಬ ಭರವಸೆ ನೀಡಿದರು.