ಉಡುಪಿ: ಜನ್ಮಭೂಮಿ ಜನ ಸೇವಾ ಟ್ರಸ್ಟ್ ರಿ. ಉಡುಪಿ ಇದರ ಉದ್ಘಾಟನಾ ಸಮಾರಂಭ

ಸಮಾಜ ಸೇವಕರಿಗೆ, ಸೇವಾ ಸಂಸ್ಥೆಗೆ ಸನ್ಮಾನ ಹಾಗೂ ಅಶಕ್ತ ಕುಟುಂಬಗಳಿಗೆ ಧನ ಸಹಾಯ

ಉಡುಪಿ : ಜನ್ಮಭೂಮಿ ಜನ ಸೇವಾ ಟ್ರಸ್ಟ್ ರಿ. ಉಡುಪಿ ಇದರ ಉದ್ಘಾಟನಾ ಸಮಾರಂಭವು ಕಾಪು ಶ್ರೀ ಜನಾರ್ದನ ದೇವಸ್ಥಾನದ ಸಭಾಗ್ರಹದಲ್ಲಿ ಇಂದು ಸಂಜೆ ಜರಗಿತು.

 ಸಮಾರಂಭವನ್ನು ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚಿಸಿ ಶುಭ ಹಾರೈಸಿದರು.

ಮಂಜಣ್ಣ ಸೇವಾ ಬ್ರೀಗೆಡ್® ಮಂಗಳೂರು,ಸಮಾಜ ಸೇವಕರಾದ ಮೋಹನ್ ದಾಸ್ ಮರಕಡ,ಸತ್ಯದ ತುಳುವೆರ್ ®ಉಡುಪಿ ಮಂಗಳೂರು,ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗುಡ್ಡ ಪಾಣರ,ವಾತ್ಸಲ್ಯ ಉಡುಪಿ,ಸಮಾಜ ಸೇವಕರಾದ ಅರ್ಜುನ್ ಭಂಡರ್ಕಾರ್,ವೀರಕೇಸರಿ ಬೆಳ್ತಂಗಡಿ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು ಈ ಸಂದರ್ಭ 3 ಕುಟುಂಬಗಳಿಗೆ ಸಹಾಯ ಧನವನ್ನು ಹಸ್ತಾಂತರಿಸಲಾಯಿತು

 ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸಂದೀಪ್ ಬಂಗೇರ ವಹಿಸಿದ್ದರು. ಸಮಾರಂಭದಲ್ಲಿ ಕಾಪು ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಅಲೆವೂರು, ಗಣ್ಯರಾದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಕಾಪು ಶಾಸಕರಾದ ಶ್ರೀ ಲಾಲಾಜಿ ಅರ್ ಮೆಂಡನ್ ಶ್ರೀ ಸುರೇಶ್ ಶೆಟ್ಟಿ ಗುರ್ಮೆ ಅನಿಲ್ ಪೂಜಾರಿ ಕಾಪು, ಶ್ರೀಕಾಂತ ಶೆಟ್ಟಿ ಕಾರ್ಕಳ, ಶ್ರೀಮತಿ ಗೀತಾಂಜಲಿ ಸುವರ್ಣ, ಉಮೇಶ್ ನಾಯ್ಕ್ ಸೂಡ ಶ್ರೀ ಪ್ರಕಾಶ್ ಕುಕ್ಕೆಹಳ್ಳಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.