ಸುಬ್ರಹ್ಮಣ್ಯ: ಮುಸ್ಲಿಂ ಯುವಕನಿಗೆ ಥಳಿಸಿದ ಪ್ರಕರಣ ಹಿಂದೂ ಕಾರ್ಯಕರ್ತರ ಬಂಧನ

ಹಿಂದೂ ಕಾರ್ಯಕರ್ತರ ಬಂಧನ

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಹಿಂದು ಬಾಲಕಿಗೆ ಕಿರುಕುಳ ನೀಡಿದ ಕಾರಣ ಮುಸ್ಲಿಂ ಯುವಕನಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹಿಂದೂ ಕಾರ್ಯಕರ್ತನನ್ನು ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಧಾಕೃಷ್ಣ (45) ಮತ್ತು ವಿಶ್ವಾಸ್‌ (19) ಎಂದು ಗುರುತಿಸಲಾಗಿದೆ.

ಹಿಂದೂ ಬಾಲಕಿಗೆ ಕಿರುಕುಳ ನೀಡಿದ ಆಫೀದ್‌ ವಿರುದ್ಧ ಬಾಲಕಿಯ ತಾಯಿ ದೂರು ನೀಡಿದ್ದು, ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಆದರೆ ಇದರ ವಿರುದ್ಧ ಪ್ರತಿ ದೂರು ನೀಡಿದ ಆಫೀದ್‌ "ಪರಿಚಯವಿಲ್ಲದ ಎರಡು–ಮೂರು ಜನರು ನನ್ನನ್ನು ಬಲವಂತದಿಂದ ಎಳೆದೊಯ್ದು ಜೀಪಿನಲ್ಲಿ ಹಾಕಿದರು. ಮತ್ತೆ ಐದಾರು ಜನ ಸೇರಿ ಸಮೀಪದ ಕುಮಾರಧಾರ ಜಂಕ್ಷನ್‌ ಬಳಿಯ ಹಳೆ ಕಟ್ಟಡದ ಕೊಣೆಯೊಳಗೆ ಕರೆದೊಯ್ದು ಕೂಡಿಹಾಕಿದರು. ಸುಮಾರು 10-12 ಮಂದಿ ಸೇರಿ ದೊಣ್ಣೆ ಮತ್ತು ಬೆತ್ತಗಳಿಂದ ನನಗೆ ಹೊಡೆದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.  

ಹಿಂದೂ ಬಾಲಕಿಗೆ ಕಿರುಕುಳ ನೀಡಿದ ಹಪೀಜ್ ಗೆ ಬುದ್ದಿ ಕಲಿಸಿದ್ದ ಇಬ್ಬರು ಹಿಂದೂ ಕಾರ್ಯಕರ್ತರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ‘ಬಂಧಿತರಿಬ್ಬರೂ ಕಡಬ ಸುಬ್ರಹ್ಮಣ್ಯ ಪರಿಸರದವರು ಎನ್ನಲಾಗಿದೆ.