
ಬಂಟ್ವಾಳ: ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿ ಮನೆಗಳಿಗೆ ಹೋಗುವ ದಾರಿಗಳಿಗೆ ಬೇಲಿ ಹಾಕಿ ವಿಕೃತಿ ಮೆರೆದ ದುಷ್ಕರ್ಮಿಗಳ ಬೇಲಿ ಕಿತ್ತೆಸೆದು ಮನೆಗಳಿಗೆ ರೋಡ್ ವ್ಯವಸ್ಥೆ ಮಾಡಿಕೊಟ್ಟ ಶಾಸಕ ರಾಜೇಶ್ ನಾಯ್ಕ್.ಮನೆಗೆ ಹೋಗುವ ದಾರಿಗೆ ಬೇಲಿ ಹಾಕಿ ಹಲವು ಕುಟುಂಬಕ್ಕೆ ಮುಸ್ಲಿಮರು ತೊಂದರೆ ಕೊಡುತ್ತಿದ್ದ ಘಟನೆ ನಡೆದಿದ್ದು, ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು ಸಮಸ್ಯೆ ಬಗೆಹರಿಸಿದ್ದಾರೆ.
ಅಕ್ಷಿತ್ ಸಿಂತಾನಿಕಟ್ಟೆ ಹಾಗೂ ಕ್ವಾಟ್ರಾಸ್ ನ ಇತರ 5ಜನರ ಮನೆಗೆ ಹೋಗುವ ದಾರಿಗೆ ಅಡ್ಡವಾಗಿ ಮುಸ್ಲಿಮರು ಬೇಲಿ ಹಾಕಿ ವಿಕೃತಿ ಮೆರೆದಿದ್ದರು. ಇದರಿಂದ ನೊಂದ ಕುಟುಂಬ ಹಲವು ಬಾರಿ ಪಂಚಾಯತ್ ಅಧಿಕಾರಿಗಳಿಗೆ ಮನವಿ ನೀಡಿದರೂ ಪಂಚಾಯತ್ ಸಿಬ್ಬಂದಿಗಳು ಇದರ ಬಗ್ಗೆ ಗಮನವೇ ನೀಡಿರಲಿಲ್ಲ.
ಇದರಿಂದ ಬೇಸರಗೊಂಡ ಕುಟುಂಬ ನಿನ್ನೆ ಪೂಪಾಡಿಕಟ್ಟೆಯಲ್ಲಿ ನಡೆದ ಯಕ್ಷಗಾನ ಸಮಾರಂಭದಲ್ಲಿ ಬಾಗವಹಿಸಿದ ಬಂಟ್ವಾಳದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಲ್ಲಿ ಸಮಸ್ಯೆಯನ್ನು ಹೇಳಿಕೊಂಡಾಗ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನಾಳೆ ಸಂಜೆಯೊಳಗೆ ರೋಡ್ ನ ವ್ಯವಸ್ಥೆ ಮಾಡಬೇಕೆಂದು ಆಜ್ಞೆ ಮಾಡಿದ್ದರು.
ಅವರ ಆಜ್ಞೆಯಂತೆ ಅಕ್ಷಿತ್ ಸಿಂತಾನಿಕಟ್ಟೆ ಹಾಗೂ ಕ್ವಾಟ್ರಾಸ್ ನ ಇತರ 5 ಜನರ ಮನೆಗೆ ರೋಡ್ ನ ವ್ಯವಸ್ಥೆ ಮಾಡಿಕೊಟ್ಟಿರುತ್ತಾರೆ. ಹಿಂದೂ ಕಾರ್ಯಕರ್ತರ ಮನವಿಗೆ ಸ್ಪಂದಿಸಿ ಒಂದೇ ದಿನದಲ್ಲಿ ಹೇಳಿದ ಮಾತು ನೆರವೇರಿಸಿಕೊಟ್ಟ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು.
ಹಿಂದೂ ಕಾರ್ಯಕರ್ತರ ಧ್ವನಿಗೆ ಸ್ಪಂದಿಸಿದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಪಕ್ಷದ ಪ್ರಮುಖರಿಗೆ ವಿಶ್ವಹಿಂದೂಪರಿಷದ್ ಭಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
Comments
0 comment