ಮಂಗಳೂರು: ಸಂಚಾರ ದಟ್ಟಣೆ ನಿಯಂತ್ರಿಸಲು ಬಂತು 'ಕೋಬ್ರಾ' ಬೈಕ್
ಪೊಲೀಸರಿಗೆ 'ಕೋಬ್ರಾ' ಹೆಸರಿನ ಬೈಕ್ ಹಸ್ತಾಂತರ

ಮಂಗಳೂರು: ಸಂಚಾರ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಮಂಗಳೂರು ನಗರದ ಎರಡು ಪೊಲೀಸ್‌ ಠಾಣೆಗಳಿಗೆ 'ಕೋಬ್ರಾ' ಹೆಸರಿನ ನಾಲ್ಕು ' ದ್ವಿಚಕ್ರ ವಾಹನಗಳನ್ನು ಮಂಗಳೂರು ನಗರ ಪೊಲೀಸ್‌ ಆಯುಕ್ತ ಕುಲ್‌ದೀಪ್‌ ಆರ್‌ ಜೈನ್‌ ಅವರು ಹಸ್ತಾಂತರಿಸಿದರು.

ನಗರದಲ್ಲಿ ಸುಗಮ ಸಂಚಾರವನ್ನು ಜಾರಿ ಮಾಡಲು ಎಷ್ಟೇ ಆಧುನಿಕ ತಂತ್ರಜ್ಞಾನಗಳನ್ನು ಬಳಸಿದರೂ ಸಹ ಸಂಚಾರ ಪೊಲೀಸರ ಇರುವಿಕೆಯು ಅನಿವಾರ್ಯವಾಗಿರುತ್ತದೆ. ಸಣ್ಣ ಪುಟ್ಟ, ಅಪಘಾತ ಸಂಭವಿಸಿ ವಾಹನ ಸವಾರರುಗಳು ಜಗಳವಾಡಿಕೊಂಡ ಸಂದರ್ಭದಲ್ಲಿ ವಾಹನಗಳನ್ನು ರಸ್ತೆಯ ಮಧ್ಯದಲ್ಲಿಯೇ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡಚಣೆಯನ್ನು ಮಾಡುತ್ತಾರೆ.

ಇನ್ನು ಈ ರೀತಿಯ ಸಮಯದಲ್ಲಿ ಸ್ಥಳಕ್ಕೆ ತುರ್ತಾಗಿ ಹೋಗಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಈ ದ್ವಿಚಕ್ರ ವಾಹನಗಳು ಸಹಕಾರಿಯಾಗುತ್ತವೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!