ವಿಟ್ಲ:  ಅಕ್ರಮ ಗೋ ಸಾಗಟ ತಡೆದ ಹಿಂ.ಜಾ.ವೇ ಕಾರ್ಯಕರ್ತರು
ನಿರಂತರ ಕೇರಳಕ್ಕೆ ಗೋ ಸಾಗಾಟ: ಪಟ್ಟು ಬಿಡದೆ ಹಿಡಿದೇ ಬಿಟ್ಟ ಹಿಂದೂ ಕಾರ್ಯಕರ್ತರು

ವಿಟ್ಲ: ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆಯಲ್ಲಿ ವಿಟ್ಲ ಸಮೀಪದ ಪುಣಚ ದೇವಿ ನಗರ ಬಳಿ ಅಕ್ರಮ ಗೋ ಸಾಗಾಟ ತಡೆದ ಘಟನೆ ನಡೆದಿದೆ.

ನಿರಂತರ ಗೋ ಸಾಗಾಟ ಮಾಡುತ್ತಿದ್ದ ಮಹೇಶ್ವರ ಪಿಕಪ್ ಹಾಗೂ ಸುಂದರ ಎಂಬಾತನನ್ನು ಹಿಡಿದು ಪೊಲೀಸ್ ವಶಕ್ಕೆ ನೀಡಲಾಗಿದೆ.

ಗೋ ಸಾಗಾಟಕ್ಕೆ ಪರವಾನಿಗೆ ಮಾಡಿ ಸಾಗಾಟ ಮಾಡುವುದರಲ್ಲಿ ನಿಪುಣನಾಗಿರುವ ಈತ ನಿರಂತರ ಕೇರಳ ರಾಜ್ಯದ ಭಾಗಗಳಿಗೆ ದನ ಸಾಗಟ ಮಾಡುತಿದ್ದ. ಈತ ಒಂದು ವಾರದ ಹಿಂದೆ ಆರ್ಲಪದವಿನಲ್ಲಿ ಸಿಕ್ಕಿಬಿದ್ದಿದ್ದ. ಆದರೆ ಪರವಾನಿಗೆ ತೋರಿಸಿ ಎಸ್ಕೇಪ್ ಆಗಿದ್ದ ಎನ್ನಲಾಗಿದೆ.

ಆದರೆ ಈ ಸಲ ಈ ಬುದ್ಧಿವಂತ ಮೂರ್ಖ ಒಂದು ಪರವಾನಿಗೆಯಲ್ಲಿ ಕೇರಳದ ಕಾಸರಗೋಡಿಗೆ ಎರಡು ಗೋಗಳನ್ನು ಒಂದೇ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿತ್ತು.  ಹಾಗಾಗಿ ಇರುವ ಪರವಾನಿಗೆ ಅಕ್ರಮವಾಗಿರುತ್ತದೆ. ಈತ  ಕುಖ್ಯಾತ ಗೋ ಬ್ರೋಕರ್ ಆಗಿರುವ ಹನಿಫ್ ತಿಂಗಳಾಡಿಯ ಆಪ್ತನಾಗಿದ್ದಾನೆ.

ಸದ್ಯ ಹಿಂದೂ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದ ಈತ ಪೊಲೀಸರ ಅತಿಥಿಯಾಗಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!