ಮಂಗಳೂರು: ಮನೆಗೆ ಆಧಾರವಾಗಿದ್ದ ವ್ಯಕ್ತಿ ಕ್ಯಾನ್ಸರ್ ರೋಗಕ್ಕೆ ತುತ್ತಾದ ಕಾರಣ ಮನೆಯವರು ಕಷ್ಟಕ್ಕೆ ಸ್ಪಂದಿಸುವ ದಾನಿಗಳ ನಿರೀಕ್ಷೆಯಲ್ಲಿದ್ದಾರೆ.
ನಂದನಪುರದ ಆಕಾಶಭವನದ ಕಾವೂರು ಇಲ್ಲಿನ ನಿವಾಸಿ ಲೋಕೇಶ್ ಪೂಜಾರಿ ಇವರು ಕೆಲವು ವರ್ಷದಿಂದ ಬಾಯಿಯ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದ 2019ರಿಂದ ಇವರು ಎ.ಜೆ. ಹಾಸ್ಪಿಟಲ್ನಲ್ಲಿ ಪದೇಪದೇ ದಾಖಲಾಗುತ್ತಿದ್ದಾರೆ. ಇಲ್ಲಿಯವರೆಗೆ ಸಾಕಷ್ಟು ಹಣ ವೆಚ್ಚವಾಗಿದೆ.
ಇವರ ಕುಟುಂಬ ತುಂಬಾ ಬಡತನದಲ್ಲಿ ಇರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಹಣ ಹೊಂದಿಸಲು ತುಂಬಾ ಕಷ್ಟವಾಗಿದೆ. ಇವರಿಗೆ ಒಬ್ಬಳು ಹೆಣ್ಣು ಮಗಳು ಇದ್ದು, ಅವಳ ವಿದ್ಯಾಭ್ಯಾಸವು ಅರ್ಧದಲ್ಲೇ (ದ್ವಿತೀಯ ಪಿ.ಯು.ಸಿ.) ನಿಂತಿದೆ.
ಸದ್ಯ ಅವರ ಪತ್ನಿ ಮನೆ ಕೆಲಸ ಮಾಡುತ್ತಾ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಜೀವನ ನಡೆಸುವುದೇ ತುಂಬಾ ಕಷ್ಟಕರವಾಗಿದ್ದು, ದಾನಿಗಳ ನಿರೀಕ್ಷೆಯಲ್ಲಿದ್ದಾರೆ.
ನಮ್ಮ ಕಷ್ಟಕ್ಕೆ ಕೈಲಾದಷ್ಟು ಸಹಾಯ ಮಾಡಿ ಎಂದು ಲೋಕೇಶ್ ಪೂಜಾರಿ ಅವರ ಪತ್ನಿ ಮನವಿ ಮಾಡಿದ್ದಾರೆ.
Name: Sindhu
Karnataka Bank
A/c No. 1852500101632001
IFSC Code: KARB0000185 Branch: Derebail, Mangalore
Comments
0 comment