ಮಂಗಳೂರು: ಚಿಕಿತ್ಸಾ ವೆಚ್ಚಕ್ಕಾಗಿ ದಾನಿಗಳ ನಿರೀಕ್ಷೆಯಲ್ಲಿ ಬಡ ಕುಟುಂಬ
ಕ್ಯಾನ್ಸರ್ ನಿಂದ ಬಳಲುತ್ತಿರುವ ಲೋಕೇಶ್ ಪೂಜಾರಿ : ನೆರವಿಗಾಗಿ ಮನವಿ

ಮಂಗಳೂರು: ಮನೆಗೆ ಆಧಾರವಾಗಿದ್ದ ವ್ಯಕ್ತಿ ಕ್ಯಾನ್ಸರ್‌ ರೋಗಕ್ಕೆ ತುತ್ತಾದ ಕಾರಣ ಮನೆಯವರು ಕಷ್ಟಕ್ಕೆ ಸ್ಪಂದಿಸುವ ದಾನಿಗಳ ನಿರೀಕ್ಷೆಯಲ್ಲಿದ್ದಾರೆ.

ನಂದನಪುರದ ಆಕಾಶಭವನದ ಕಾವೂರು ಇಲ್ಲಿನ ನಿವಾಸಿ ಲೋಕೇಶ್ ಪೂಜಾರಿ ಇವರು ಕೆಲವು ವರ್ಷದಿಂದ ಬಾಯಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದ 2019ರಿಂದ ಇವರು ಎ.ಜೆ. ಹಾಸ್ಪಿಟಲ್‌ನಲ್ಲಿ ಪದೇಪದೇ ದಾಖಲಾಗುತ್ತಿದ್ದಾರೆ. ಇಲ್ಲಿಯವರೆಗೆ ಸಾಕಷ್ಟು ಹಣ ವೆಚ್ಚವಾಗಿದೆ. 

ಇವರ ಕುಟುಂಬ ತುಂಬಾ ಬಡತನದಲ್ಲಿ ಇರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಹಣ ಹೊಂದಿಸಲು ತುಂಬಾ ಕಷ್ಟವಾಗಿದೆ. ಇವರಿಗೆ ಒಬ್ಬಳು ಹೆಣ್ಣು ಮಗಳು ಇದ್ದು, ಅವಳ ವಿದ್ಯಾಭ್ಯಾಸವು ಅರ್ಧದಲ್ಲೇ (ದ್ವಿತೀಯ ಪಿ.ಯು.ಸಿ.) ನಿಂತಿದೆ.

ಸದ್ಯ ಅವರ ಪತ್ನಿ ಮನೆ ಕೆಲಸ ಮಾಡುತ್ತಾ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಜೀವನ ನಡೆಸುವುದೇ ತುಂಬಾ ಕಷ್ಟಕರವಾಗಿದ್ದು, ದಾನಿಗಳ ನಿರೀಕ್ಷೆಯಲ್ಲಿದ್ದಾರೆ.

ನಮ್ಮ ಕಷ್ಟಕ್ಕೆ ಕೈಲಾದಷ್ಟು ಸಹಾಯ ಮಾಡಿ ಎಂದು ಲೋಕೇಶ್ ಪೂಜಾರಿ ಅವರ ಪತ್ನಿ ಮನವಿ ಮಾಡಿದ್ದಾರೆ.

Name: Sindhu

Karnataka Bank

A/c No. 1852500101632001

IFSC Code: KARB0000185 Branch: Derebail, Mangalore


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!