ಉಡುಪಿಯ ಸಮಾಜ ಸೇವಕನಿಗೆ ಗೌರವ ಡಾಕ್ಟರೇಟ್
ಉಡುಪಿಯ ಸಮಾಜ ಸೇವಕನಿಗೆ ಗೌರವ ಡಾಕ್ಟರೇಟ್

ಉಡುಪಿ: ಯಾವುದೇ ಪ್ರಚಾರ ಬಯಸದೆ ಕಳೆದ 23 ವರ್ಷ ಗಳಿಂದ ನಿರಂತರವಾಗಿ  ಸಮಾಜ ಸೇವೆ ಮತ್ತು ಮಾನವ ಹಕ್ಕುಗಳ ರಕ್ಷಣೆ ಮಾಡುತ್ತಾ ಭ್ರಷ್ಟಾಚಾರ ವಿರೋಧಿ ಹೋರಾಟಗಳಲ್ಲಿ ತೊಡಗಿಸಿಕೊಂಡು  ಪ್ರಸ್ತುತ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್ ಕರ್ಜೆಯವರಿಗೆ ಗೌರವ ಡಾಕ್ಟರೇಟ್ ದೊರೆತಿದೆ.  

ಶಿವಕುಮಾರ್ ಕರ್ಜೆಯವರ ನಿಸ್ವಾರ್ಥ ಸೇವೆ ಯನ್ನು ಗುರುತಿಸಿ ಗ್ಲೋಬಲ್ ಹ್ಞೂ‌‌‌ಮನ್   ಪೀಸ್ ಯೂನಿವರ್ಸಿಟಿ ಯಿಂದ ಕೊಡಮಾಡುವ   ಗೌರವ ಡಾಕ್ಟರೇಟ್ ಪ್ರಧಾನ  ಸಮಾರಂಭ ದಿನಾಂಕ  27/5/2023 ನೇ ಶುಕ್ರವಾರ ನವದೆಹಲಿಯ ಡಾ ಬಿ ಆರ್ ಅಂಬೇಡ್ಕರ್ ಆಡಿಟೋರಿಯಂ,    ಆಂಧ್ರ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ಶಿವಕುಮಾರ್ ಕರ್ಜೆ  ಗೌರವ ಡಾಕ್ಟರೇಟ್ ಸ್ವೀಕರಿಸಿದರು   ಕೇಂದ್ರ ಸರ್ಕಾರದ ಸಚಿವರು, ನ್ಯಾಯಮೂರ್ತಿಗಳು, ಯೂನಿವರ್ಸಿಟಿ ಮುಖ್ಯಸ್ಥರು, ಸಮಾಜದ ಗಣ್ಯ, ವ್ಯಕ್ತಿಗಳು ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!