ಮುಸ್ಲಿಂ ಯುವಕರ ಬಲೆಗೆ ಬಿದ್ದು ಹಿಂದೂ ಸೋದರಿಯರ ಜೀವಾಂತ್ಯ
ಮುಸ್ಲಿಂ ಸಹೋದರರ ಜೊತೆ ಜವಳಿ ಗಿರಣಿಯಲ್ಲಿ ಕೆಲಸ : ಲವ್ ಜಿಹಾದ್‌ʼಗೆ ಬಲಿಯಾದ್ರ ಯುವತಿಯರು

ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಇಬ್ಬರು ಸಹೋದರಿಯರು ತಾವು ಪ್ರೀತಿಸುತ್ತಿದ್ದ ಮುಸ್ಲಿಂ ಹುಡುಗರನ್ನು ಪೋಷಕರು ವಿರೋಧಿಸಿದ್ದಕ್ಕೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಇಬ್ಬರೂ ಹಿಂದೂ ಸಹೋದರಿಯರು ಇಬ್ಬರು ಮುಸ್ಲಿಂ ಸಹೋದರರನ್ನು ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಈ ಅನ್ಯಧರ್ಮೀಯ ಪ್ರೀತಿಗೆ ಪೋಷಕರು ವಿರೋಧಿಸಿದ್ದರು. ಈ ಹಿನ್ನೆಲೆ ಇಬ್ಬರು ಯುವತಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ವಳನಾಡು ಗ್ರಾಮದ ಬಾವಿಯೊಂದರಲ್ಲಿ ವಿದ್ಯಾ (21) ಮತ್ತು ಗಾಯತ್ರಿ (23) ಮೃತದೇಹಗಳು ತೇಲುತ್ತಿದ್ದವು, ಇವರಿಬ್ಬರೂ ಮರುಂಗಾಪುರಿ ತಾಲೂಕಿನ ಅಯನಪುದುಪಟ್ಟಿ ಗ್ರಾಮದವರು. ಈ ಸಹೋದರಿಯರು ತಿರುಪ್ಪೂರು ಜಿಲ್ಲೆಯ ಕಾಂಗೆಯಂನ ಜವಳಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ತಮ್ಮ ಸಹೋದ್ಯೋಗಿಗಳಾದ ಇಬ್ಬರು ಸಹೋದರರನ್ನು ಭೇಟಿಯಾದರು ಮತ್ತು ಅವರನ್ನು ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಇದಕ್ಕೆ ಸೋದರಿಯ ಪೋಷಕರು ವಿರೋಧಿಸುತ್ತಿದ್ದರು.

ಇಬ್ಬರೂ ಸಹೋದರಿಯರು ತಮ್ಮ ಗ್ರಾಮದಲ್ಲಿ ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಳ್ಳಲು ಭಾನುವಾರ ಮನೆಗೆ ಬಂದಿದ್ದರು. ತಮ್ಮ ಹೆಣ್ಣುಮಕ್ಕಳು ದೀರ್ಘ ಕಾಲದಿಂದ ಫೋನ್ ಕರೆಗಳಲ್ಲಿ ತೊಡಗಿರುವುದನ್ನು ಅವರ ಪೋಷಕರು ಗಮನಿಸಿದರು. ಬಳಿಕ, ಇನ್ನೂ ಪ್ರೀತಿಸುತ್ತಿರುವ ಬಗ್ಗೆ ಅನುಮಾನ ಬಂದು ಪ್ರಶ್ನಿಸಿದಾಗ ಸಹೋದರಿಯರು ಅದನ್ನು ಒಪ್ಪಿಕೊಂಡರು. ಆದರೆ, ಅವರು ಪ್ರೀತಿಸುತ್ತಿದ್ದ ಪುರುಷರು ಮುಸ್ಲಿಮರಾಗಿದ್ದ ಕಾರಣ ಹುಡುಗಿಯರ ಪೋಷಕರು ಇದನ್ನು ಬಲವಾಗಿ ವಿರೋಧಿಸಿದರು ಅಲ್ಲದೆ, ಅವರನ್ನು ಮಾತನಾಡಿಸುವುದನ್ನು ನಿಲ್ಲಿಸಿ ಎಂದೂ ಒತ್ತಡ ಹಾಕಿದ್ದಾರೆ.

ಸೋಮವಾರದ ಈ ಘರ್ಷಣೆಯ ಬಳಿಕ ಮಂಗಳವಾರ ಬೆಳಗ್ಗೆ 7:30ಕ್ಕೆ ಇಬ್ಬರೂ ಸಹೋದರಿಯರು ಮನೆಯಿಂದ ಹೋದವರು ಹಲವು ಗಂಟೆಗಳಾದರೂ ವಾಪಸ್‌ ಹಿಂತಿರುಗಲಿಲ್ಲ ಎಂದು ತಿಳಿದುಬಂದಿದೆ. ಬಳಿಕ, ಸ್ಥಳೀಯ ದನಗಾಹಿಗಳು ಮನೆಯ ಸಮೀಪವಿರುವ ಬಾವಿಯೊಂದರಲ್ಲಿ ಎರಡು ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿದ್ದಾರೆ ಮತ್ತು ಒಂದು ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಗಮನಕ್ಕೆ ಬಂದಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!