ಮಂಗಳೂರು: ರೈಲು ಡಿಕ್ಕಿಯಾಗಿ ಯುವಕ ದಾರುಣ ಮೃತ್ಯು.!
ಸೌದಿ ತೆರಳಬೇಕಿದ್ದ ಯುವಕ ರೈಲು ಡಿಕ್ಕಿ ಹೊಡೆದು ಸಾವು

ಮಂಗಳೂರು : ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಯುವಕನೋರ್ವನು ರೈಲು ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸಂಕೊಳಿಗೆ ರೈಲ್ವೇ ಹಳಿಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.

ಉಚ್ಚಿಲ ರೈಲ್ವೇ ಗೇಟ್ ಬಳಿಯ ನಿವಾಸಿ ಜಾಫ‌ರ್ (22) ಮೃತಪಟ್ಟ ಯುವಕ.

ಜಾಫರ್ ತಮ್ಮ ಮನೆ ಕಡೆಗೆ ತಡರಾತ್ರಿ ಬರುತ್ತಿದ್ದ ವೇಳೆ ರೈಲ್ವೇ ಹಳಿಯನ್ನು ದಾಟುತ್ತಿದ್ದರು. ಆಗ ರೈಲು ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮೃತಪಟ್ಟ ಜಾಫ‌ರ್ ಸಹೋದರ ಸೌದಿ ಅರೇಬಿಯಾದಲ್ಲಿದ್ದರು. ಆದ್ದರಿಂದ ಜಾಫ‌ರ್ ಕೂಡಾ ಸೌದಿಗೆ ಬರುವುದಕ್ಕೆ ವೀಸಾ ಕಳಿಸಿದ್ದರು. ಇತ್ತೀಚೆಗಷ್ಟೇ ಮುಂಬೈನಿಂದ ಊರಿಗೆ ಬಂದಿದ್ದ ಜಾಫರ್ ಫೆ.14ಕ್ಕೆ ಸೌದಿ ಅರೇಬಿಯಾಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಆದರೆ, ಇದೀಗ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾನೆ. ಇದು ಆತ್ಮಹತ್ಯೆಯೆಂಬ ಶಂಕೆಯೂ ಇದೆ. ಆದ್ದರಿಂದ ಜಾಫ‌ರ್ ಮೊಬೈಲ್ ಫೋನ್ ಅನ್ನು ವಶಕ್ಕೆ ತೆಗೆದುಕೊಂಡ ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!