ಪುತ್ತೂರಿಗೆ ಆಗಮಿಸಿದ ಬಸನ ಗೌಡ ಯತ್ನಾಳ್

ಸ್ವಾಗತಕೋರಿದ ಅರುಣ್ ಪುತ್ತಿಲ

ಪುತ್ತೂರು: ಬ್ಯಾನರ್ ಪ್ರಕರಣದಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಲು ಬಿಜೆಪಿ ಶಾಸಕ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಪುತ್ತೂರಿನ ಸಂಘ ಕಾರ್ಯಾಲಯ ಪಂಚವಟಿಗೆ ಆಗಮಿಸಿದ್ದಾರೆ.

ಸದ್ಯ ರಾಜ್ಯದಲ್ಲೇ ಸಂಚಲನ ಮೂಡಿಸಿದ ಪ್ರಕರಣ ಇದಾಗಿದ್ದು, ಘಟನೆಯ ನಿಜಾಂಶ ಇನ್ನು ಹೊರಬಿದ್ದಿಲ್ಲ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಘಟನೆಗೆ ಕಾರಣಕರ್ತರು ಯಾರು ಎನ್ನುವುದು ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ.

ಯುವಕರನ್ನು ನೋಡಲು ಹಲವು ನಾಯಕರು ಆಗಮಿಸಿದ್ದು, ಇಂದು ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್  ಆಗಮಿಸಿದ್ದು ಅರುಣ್ ಪುತ್ತಿಲ ಅವರು ಸ್ವಾಗತ ಕೋರಿದ್ದಾರೆ. ಪೊಲೀಸರಿಂದ ಹಲ್ಲೆಗೊಳಗಾದ ಯುವಕರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.