ಮಂಗಳೂರು: ಅಯ್ಯಪ್ಪ ಮಲಾಧಾರಿ ಬಾಲಕನಿಗೆ ಹಲ್ಲೆ ನಡೆಸಿದ ಘಟನೆ ಕಪಿತಾನಿಯೋ ಶಾಲೆ ಬಳಿ ನಡೆದಿದೆ.
ಬಾಲಕ ಮಾಲೆ ಧರಿಸಿದನ್ನೆ ಎಂಬ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿಗಳು ಆತನಿಗೆ ಹೊಡೆದು ಕೊರಳಿನಲ್ಲಿದ್ದ ಮಾಲೆಯನ್ನು ಕಿತ್ತು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಬಾಲಕ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
"ಮತಾಂಧ ಶಕ್ತಿಗಳು ಅವರ ಕ್ರೌರ್ಯವನ್ನು ತೋರಿಸುತ್ತ ಇದ್ದಾರೆ. ಇದಕ್ಕೆ ನೇರ ಕಾರಣ ಮಾದರಾಸದಲ್ಲಿ ನೀಡುವ ಶಿಕ್ಷಣ" ಎಂದು ಹಿಂದು ಸಂಘಟನಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.