ಉಪ್ಪಿನಂಗಡಿ: ಬೆಲೆಬಾಳುವ ಮರ ಕಡಿದು ಸಾಗಾಟ ಮಾಡಿದ ಕಳ್ಳರು.!
ಮರಗಳ ಕಳವು - ತನಿಖೆಗೆ ಆದೇಶ

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕರಾಯ ಸರಕಾರಿ ಉನ್ನತೀಕರಿಸಿದ ಶಾಲೆಯ ಆವರಣದಲ್ಲಿ ಬೆಲೆಬಾಳುವ ಮರಗಳನ್ನು ಕಳ್ಳರು ಕಳವುಗೈದಿದ್ದಾರೆ.

ಬೆಳ್ತಂಗಡಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಗೆ ತಾಗಿಕೊಂಡಿದ್ದು, ಕೂಗಳತೆ ದೂರದಲ್ಲಿದ್ದು ಹತ್ತಕ್ಕೂ ಮಿಕ್ಕ ಮರಗಳನ್ನು ಶಾಲೆ ರಜೆ ದಿನಗಳಂದು ಕಡಿದು ಸಾಗಿಸಲಾಗಿದೆ.

ಪುತ್ತೂರು ಉಪವಿಭಾಗಧಿಕಾರಿಗಳಿಗೆ ಖಚಿತ ಮಾಹಿತಿ ತಿಳಿದ ಮೇರೆಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

ಈ ಮರಗಳನ್ನು ಶಾಲಾಭಿವೃದ್ಧಿ ಸಮಿತಿ ನೆಟ್ಟು ಬೆಳೆಸಿದ್ದು, ಮರಗಳನ್ನು ಪೀಠೊಪಕರಣಗಳ ರಚನೆಗಾಗಿ ಅವಕಾಶ ಕೇಳಿ ಮನವಿ ಸಲ್ಲಿಸಿದ್ದು, ಈಗಾಗಲೇ ಹಿರಿಯ ಅಧಿಕಾರಿಗಳ ಕಚೇರಿಯಲ್ಲಿ ಕಡತವಿತ್ತು. ಮರಗಳನ್ನು ಕಡಿಯಲು ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆಯವರು ಗುರುತು ಮಾಡಿ ಹೋಗಿದ್ದರು ಎನ್ನಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!