ಸದಾ ಸಮಾಜ ಸೇವೆಯಲ್ಲಿ ತೊಡಗಿದ್ದ ಉಪ್ಪಳ ಕೊಡಿಬೈಲ್ ನಾರಾಯಣ ಶೆಟ್ಟಿ ಇನ್ನಿಲ್ಲ
ಸಾಮಾಜಿಕ ಮುಂದಾಳು ಉದ್ಯಮಿ ಉಪ್ಪಳ ಕೊಡಿಬೈಲ್ ಯು.ನಾರಾಯಣ ಶೆಟ್ಟಿ ನಿಧನ

ಭಾಜಪ ಮಂಜೇಶ್ವರ ಮಂಡಲದ ಮಾಜಿ ಪ್ರಧಾನ ಕಾರ್ಯದರ್ಶಿ, ಸಾಮಾಜಿಕ ಧಾರ್ಮಿಕ ಮುಂದಾಳತ್ವದಲ್ಲಿ ಗುರುತಿಸಿಕೊಂಡು, 1974 ರಿಂದಲೇ ಉಪ್ಪಳ ಪೇಟೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರಾಗಿ. ಅದೆಷ್ಟೋ ಹಸಿದವರಿಗೆ ಅನ್ನ ನೀಡಿ, ಅದೆಷ್ಟೋ ಜನರಿಗೆ ಆಪತ್ಕಾಲದಲ್ಲಿ ನೆರವಾಗುತ್ತಿದ್ದ ಉದ್ಯಮಿ ಉಪ್ಪಳ ಕೊಡಿಬೈಲ್ ಯು.ನಾರಾಯಣ ಶೆಟ್ಟಿ ಅವರು ನಿಧನರಾಗಿದ್ದರೆ.

ದಿ.ಬೊಳ್ಳಾರು ದೂಮಣ್ಣ ಶೆಟ್ಟಿ ಹಾಗೂ ಸೀತಮ್ಮ ದಂಪತಿಗಳ ಮಗನಾಗಿ ಜನಿಸಿದ ಇವರು ಉದ್ಯಮಿಯಾಗಿ ಉಪ್ಪಳದಲ್ಲಿ ಜನಿಸಿ ಇವರು ಸರಳ ಮತ್ತು ಸಜ್ಜನ ವ್ಯಕ್ತಿತ್ವದ ಇವರು ಧಾರ್ಮಿಕ ಮತ್ತು ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡ ಕೊಡುಗೈ ದಾನಿಯಾಗಿದ್ದರು. ಜುಲೈ 30 ರಾತ್ರಿ ಎಂದಿನಂತೆ ಊಟ ಮಾಡಿ ಹತ್ತು ಗಂಟೆ ಸುಮಾರಿಗೆ ನಿಂತಲ್ಲೇ ಕುಸಿದು ಬಿದ್ದ ಪರಿಣಾಮವಾಗಿ ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆ ಸೇರಿಸಿದ್ದರು ಸಹ ತೀವ್ರವಾದ ಮೆದುಳಿನ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದರು.

ಇವರು ಭಾಜಪ ಮಂಜೇಶ್ವರ ಮಂಡಲದ ಮಾಜಿ ಪ್ರಧಾನ ಕಾರ್ಯದರ್ಶಿಗಳು, ಸಾಮಾಜಿಕ ಧಾರ್ಮಿಕ ಮುಂದಾಳತ್ವದಲ್ಲಿ ಗುರುತಿಸಿಕೊಂಡು,1974 ರಿಂದಲೇ ಉಪ್ಪಳ ಪೇಟೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರಾಗಿ. ಸದಾ ಹಸನ್ಮುಖಿಯಾಗಿದ್ದ ಇವರು ಅದೆಷ್ಟೋ ಹಸಿದವರಿಗೆ ಅನ್ನ ನೀಡಿದವರು, ಅದೆಷ್ಟೋ ಜನರಿಗೆ ಆಪತ್ಕಾಲದಲ್ಲಿ ನೆರವು ನೀಡಿದವರು, ನೊಂದವರಿಗೆ ಸಾಂತ್ವನ ಹೇಳಿದವರು, ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎಲ್ಲಾ ಬ್ರಹ್ಮಕಲಶೋತ್ಸವ ಸಮಿತಿಯಲ್ಲಿ ಸಕ್ರಿಯರಾಗಿದ್ದ ಇವರು ಕೊಂಡೆಯೂರು ಮಠದಲ್ಲಿ ನಡೆದ ಯಾಗದ ಸಂಧರ್ಭದ ಜವಾಬ್ದಾರಿಯನ್ನು, ಅಯ್ಯಪ್ಪ ಭಜನಾ ಮಂದಿರದ ಬ್ರಹ್ಮಕಲಶದ ಸಂಧರ್ಭದಲ್ಲಿ ಯಶಸ್ವಿಯಾಗಿ ಮುನ್ನಡೆಸಿದವರು. 

ಇವರ ಅಂತಿಮ ಸಂಸ್ಕಾರದಲ್ಲಿ ರಾಜಕೀಯ, ಧಾರ್ಮಿಕ ನಾಯಕರು ಬಂಧು ಮಿತ್ರರು ಭಾಗವಹಿಸಿ ಸಂತಾಪ ಸೂಚಿಸಿದ್ದು,  ಇವರು ಧರ್ಮಪತ್ನಿ ಸುಜಾತ ಯನ್ ಶೆಟ್ಟಿ ಹಾಗೂ ಇರ್ವರು ಮಕ್ಕಳು ಮತ್ತು ಸಹೋದರ ಸಹೋದರಿಯರನ್ನು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!