ಉಡುಪಿ: ಮೋದಿ ಉತ್ಸವ ಸಮಿತಿ ಉದ್ಘಾಟನಾ ಸಮಾರಂಭ - ಶಿಕ್ಷಕರಿಗೆ ಸನ್ಮಾನ
ಪ್ರಧಾನಿ ಮೋದಿ ಜನ್ಮದಿನ ವಿಶಿಷ್ಟವಾಗಿ ಆಚರಿಸುವ ಉದ್ದೇಶ

ಉಡುಪಿ:  ಪ್ರಧಾನಿ ನರೇಂದ್ರ ಮೋದಿ ಯವರ ಜನ್ಮದಿನವನ್ನು ವಿಶಿಷ್ಟವಾಗಿ ರೀತಿಯಲ್ಲಿ ಆಚರಿಸುವ ಸಲುವಾಗಿ ಇಂದು ಉಡುಪಿಯ ಕೊಡವೂರು ವಿಪ್ರ ಸಭಾಭವನದಲ್ಲಿ ಮೋದಿ ಉತ್ಸವ ಸಮಿತಿ, ಉದ್ಘಾಟನಾ ಸಮಾರಂಭ ನಡೆಯಿತು.

ಮೋದಿ ಉತ್ಸವ ಸಮಿತಿಯ ಕಾರ್ಯಕ್ರಮಗಳನ್ನು ನಗರ ಸಭೆಯ ಸದಸ್ಯರಾದ ಶ್ರೀ ವಿಜಯ ಕೊಡವೂರು ಪ್ರಾಸ್ತಾವಿಕವಾಗಿ ತಿಳಿಸಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 73ನೇ ಹುಟ್ಟುಹಬ್ಬದ ಅಂಗವಾಗಿ 1 ತಿಂಗಳ ಸೇವಾಕಾರ್ಯಕ್ಕೆ ಚಾಲನೆ ನೀಡಿ,ಮೋದಿ ಉತ್ಸವ - 2023,   ಉದ್ಘಾಟಿಸಿದ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ  ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ 29 ಶಿಕ್ಷಕರನ್ನು ಗೌರವಿಸಲಾಯಿತು. 

ರಕ್ತದಾನ ಶಿಬಿರದ ಆಯೋಜನೆ ಮಾಡಲಾಗಿತ್ತು.ಸಮಾರಂಭದಲ್ಲಿ , ಗಣ್ಯರಾದ ಶ್ರೀ ನಾರಾಯಣ ಬಲ್ಲಾಳ್, ಶ್ರೀ ಕಾಳು ಸೇರಿಗಾರ್,ಶ್ರೀ ಅಶೋಕ್ ಶೆಟ್ಟಿಗಾರ್, ಶ್ರೀನಿವಾಸ ಉಪಾಧ್ಯಯ, ಶ್ರೀ ಪ್ರಭಾತ್ ಕೊಡವೂರು, ಶ್ರೀ ದಿನೇಶ್ ಕೊಡವೂರು,ಮೋದಿ ಉತ್ಸವ ಸಮಿತಿಯ ಸಂಚಾಲಕರಾದ ಶ್ರೀ ಶಿವಕುಮಾರ್ ಕರ್ಜೆ, ಶ್ರೀ ರಾಧಾಕೃಷ್ಣ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ರಾಮಾಂಜಿ  ನಿರೂಪಿಸಿದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!