ಪಡುಬಿದ್ರೆ: ಬೈಕ್, ಬಸ್ ನಡುವೆ ಅಪಘಾತ ಯುವಕ ಸಾವು.!
ಭೀಕರ ಅಪಘಾತಕ್ಕೆ ಯುವಕ ಬಲಿ

ಪಡುಬಿದ್ರಿ: ಬೈಕ್, ಬಸ್ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿರುವ ಘಟನೆ ನಂದಿಕೂರು ಮುದರಂಗಡಿ ಜಂಕ್ಷನ್ ನಲ್ಲಿ ಇಂದು ಮುಂಜಾನೆ ನಡೆದಿದೆ.

ಮೃತ ಯುವಕ ಕಾರ್ಕಳ ಅಜೆಕಾರು ಬೊಂಡು ಕುಮೇರಿ ನಿವಾಸಿ ಅಶ್ವಿತ್ ಶೆಟ್ಟಿ (34) ಎಂದು ತಿಳಿದುಬಂದಿದೆ. 

ಯೂಟ್ಯೂಬ್ ಬ್ಲಾಗರ್ ಆಗಿರುವ ಅಶ್ವಿತ್ ಶೆಟ್ಟಿ ಗೂಡ್ಸ್ ಟೆಂಪೋ ಬಾಡಿಗೆ ಮಾಡೆಸುತ್ತಿದ್ದರು. ಇತ್ತೀಚಿಗೆ ಇವರು ಹೊಸ ಬೈಕ್‍ವೊಂದನ್ನು ಖರೀದಿಸಿದ್ದು, ಅದರ  ಸರ್ವಿಸ್‍ಗಾಗಿ ಮಂಗಳೂರಿಗೆ  ಹೋಗುವಾಗ ಅಪಘಾತ  ಸಂಭವಿಸಿದೆ.

ತೀವ್ರ ಗಾಯಗೊಂಡ ಅಶ್ವಿತ್ ಶೆಟ್ಟಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು  ಆಗಮಿಸಿ ತನಿಖೆ  ನಡೆಸುತ್ತಿದ್ದಾರೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!