ಇಟ್ಟಿಗೆಯಿಂದ ಯುವಕನ ಮೇಲೆ ಹಲ್ಲೆ - ಮೂವರು ಆರೋಪಿಗಳ ಬಂಧನ...
ಶಿವಮೊಗ್ಗ : ಇಟ್ಟಿಗೆಯಿಂದ ಯುವಕನ ಮೇಲೆ ಹಲ್ಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿದ್ದಾರೆ...
ಬಂಧಿತ ಆರೋಪಿಗಳು ತನ್ವೀರ್, ಅಜರ್, ಫರಾಜ್ ಬಂಧಿತ ಆರೋಪಿಗಳು.. ಇನ್ನೂ ಇಬ್ಬರ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ...
ಭರ್ಮಪ್ಪ ನಗರದ ಬಳಿ ಪ್ರವೀಣ್ ಎಂಬ ಯುವಕನಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆಂದು ಪ್ರಕರಣ ದಾಖಲಾಗಿದೆ..
ಪ್ರವೀಣ್, ಪ್ರಕಾಶ್ ಮತ್ತು ಆರೋಪಿ ತನ್ವೀರ್ ಮಧ್ಯೆ ಕೆಲ ದಿನಗಳ ಹಿಂದೆ ಮಾತಿನ ಚಕಮಕಿ ನಡೆದಿತ್ತು. ಇದಕ್ಕೆ ಪ್ರತೀಕಾರವಾಗಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ..
ಮೂವರು ಬಂಧಿತ ಆರೋಪಿಗಳ ವಿರುದ್ಧ ಈಗಾಗಲೇ ವಿವಿಧ ಠಾಣೆಗಳಲ್ಲಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ...
Comments
0 comment