ಮಹಿಳೆ ಮೇಲೆ ಹಲ್ಲೆ ಮಾಡಿ ದರೋಡೆ ನಡೆಸಿದ ಮೂವರ ಬಂಧನ.
ಮಂಗಳೂರು ಸಿಸಿಬಿ ಪೊಲೀಸರಿಂದ ಮೂವರ ಬಂಧನ...

ಮಂಗಳೂರು: ಮೂಡುಬಿದಿರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿ ದರೋಡೆ ನಡೆಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ 

ಮೂಡಬಿದಿರೆ ಬಡಗಮಿಜಾರು ಗ್ರಾಮದ ದಿನೇಶ್ ಪೂಜಾರಿ , ಬೆಳ್ತಂಗಡಿ ತಾಲೂಕಿನ ಉಳ್ಳ ಗುಡ್ಡೆ ಹೊಸಮನಿ ನಿವಾಸಿ ಸುಕೇಶ್ ಪೂಜಾರಿ , ಮೂಡಬಿದಿರೆಯ ನಿರ್ಮಾಣದ ಡಕ್ಕೆ ನಿವಾಸಿ ಹರೀಶ್ ಪೂಜಾರಿ ಬಂಧಿತರು.

ಈ ಮೂವರು ಆಗಸ್ಟ್ 30ರಂದು ರಾತ್ರಿ ಸುಮಾರು 10.30ರ ವೇಳೆ ಅಶ್ವತ್ಥಪುರದ ಬೇರಿಂಜೆ ಗುಡ್ಡೆ ನಿವಾಸಿ ಕಮಲಾ ಎಂಬ ಒಂಟಿ ಮಹಿಳೆಯ ಮನೆಗೆ ನುಗ್ಗಿದ್ದರು. ಮನೆಯಲ್ಲಿ ಒಬ್ಬರೇ ಇದ್ದ ಕಮಲಾ ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಕುರಿತು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕುಲಶೇಖರ ಚರ್ಚ್ ಗೇಟ್ ಕಳ್ಳತನ ಮಾಡಿದ ಅರೆಸ್ಟ್ ದೋಚಿದ ಚಿನ್ನಾಭರಣಗಳನ್ನು ದುಷ್ಕರ್ಮಿಗಳು ಮಂಗಳೂರಿಗೆ ತರುತ್ತಿದ್ದಾಗ ಕುಲಶೇಖರ ಚರ್ಚ್ ಗೇಟ್ ಬಳಿ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಸುಮಾರು 4.50 ಲಕ್ಷ ರೂ. ಮೌಲ್ಯದ ಬಂಗಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳವು ಮಾಡಿದ ಆಭರಣಗಳು, ಎರಡು ಸ್ಕೂಟರ್, ಮೂರು ಮೊಬೈಲ್, ಒಂದು ಮಚ್ಚು, ಎರಡು ಮಂಕಿ ಕ್ಯಾಪ್ ವಶಕ್ಕೆ ಪಡೆದಿದ್ದಾರೆ.

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!