ದಿ. ಮಂಜುನಾಥ್ ಮಂಗಳೂರು ಇವರ ಸವಿನೆನಪಿಗಾಗಿ 12ನೇ ವರ್ಷದ ಶ್ರೀ ಶಾರದಾ ಹುಲಿ ವೇಷದ ಆಮಂತ್ರಣ ಪತ್ರಿಕೆ ಮತ್ತು ಪೂರ್ವಬಾವಿ ಸಭೆ ನಡೆಯಿತು. ಶ್ರೀ ವೆಂಕಟರಮಣ ದೇವಸ್ಥಾನ ಕಾರ್ ಸ್ಟ್ರೀಟ್ ಮಂಗಳೂರು ಇದರ 100ನೇ ವರ್ಷದ ವಿಜೃಂಭಣೆಯ ಶೋಭಯಾತ್ರೆಯಲ್ಲಿ ಗೆಳೆಯರ ಬಳಗದ ಹುಲಿ ವೇಷದ ಟ್ಯಾಬ್ಲೋ ದ ಮುಖಂತರ ಶಾರದಾ ಮಾತೆಯ ಸೇವೆಯಲ್ಲಿ ಭಾಗವಹಿಸಲಿದೆ.
ದಿ. ಮಂಜುನಾಥ್ ರವರು ಹಿಂದುತ್ವಕ್ಕಾಗಿ ಬಲಿದಾನವಾದವರು. ಅವರ ನೆನಪಿಗಾಗಿ 12 ನೇ ವರ್ಷದ ಹುಲಿ ವೇಷವನ್ನು ಮಾಡಲು ಗೆಳೆಯರ ಬಳಗ ತಂಡ ನಿರ್ಧರಿಸಿದೆ. ಅದರ ಜೊತೆಗೆ ಕಳೆದ 5ವರ್ಷದಿಂದ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ)ಮಂಗಳೂರು ಸಂಸ್ಥೆಯನ್ನು ಸ್ಥಾಪಿಸಿ ಅದೆಷ್ಟೋ ಆಶಕ್ತ ಕುಟುಂಬಕ್ಕೆ ನೆರವಾಗಿ ಸಮಾಜ ಮುಖಿ ಕಾರ್ಯಕ್ರಮ ಗಳನ್ನು ಮಾಡಿಕೊಂಡು ಬಂದಿದ್ದಾರೆ. ಇದು ಹಿಂದೂ ಸಮಾಜಕ್ಕೆ ಮಾದರಿಯಾದ ಸಂಘಟನೆಯಾಗಿದೆ .
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಗಣ್ಯರಾದ
ಅನುದಾನಿತ ಪೆರ್ಮುದೆ ಹಿಂದೂ ಹಿರಿಯ ಪ್ರಾರ್ಥಮಿಕ ಶಾಲೆಯ ಸಂಚಲಕರಾಗಿರುವ ಶ್ರೀಯುತ ರಮೇಶ್ ರಾವ್
ಮಂಜಣ್ಣ ಸೇವಾ ಬ್ರಿಗೇಡ್ ಅಧ್ಯಕ್ಷರು ವಸಂತ್ ಹೊಸಬೆಟ್ಟು
ಗೆಳೆಯರ ಬಳಗದ ಸ್ಥಾಪಕಧ್ಯಕ್ಷರು ಶ್ರೀಯುತ ನಾಗೇಶ್ ಪೂಜಾರಿ ತೋಕೂರು,
ಸುರತ್ಕಲ್ ಬಜರಂಗದಳ ಸಹಸಂಚಾಲಕರು ಶ್ರೀಯುತ ಸುನಿಲ್ ತೋಕೂರು,
ಫ್ರೆಂಡ್ಸ್ ಕೋಡಿಕೆರೆ ಅಧ್ಯಕ್ಷರು ಶ್ರೀಯುತ ಶಶಿಧರ್ ಕೋಡಿಕೆರೆ,
ಶ್ರೀಯುತ ಭಾಸ್ಕರ್ ಶೆಟ್ಟಿ ಪಡುಮನೆ ಚಿಕ್ಕಪರಾರಿ ಗುತ್ತು,
ಶ್ರೀಯುತ ತಿಲಕ್ ಆಕಾಶಭವನ,
ಹಾಗೂ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.
Comments
0 comment