ಬಿಸಿ ರೋಡು ಜೋಡುಮಾರ್ಗ ಬಳಿಯ ಶ್ರೀ ಚಂಡಿಕಾ ಪರಮೇಶ್ವರಿ ದೇವಿ ದೇವಸ್ಥಾನದ ಜೀರ್ಣೋದ್ಧಾರ ದ ವಿಜ್ಞಾಪನ ಪತ್ರ ಬಿಡುಗಡೆ...
ಬಿಸಿ ರೋಡು ಜೋಡುಮಾರ್ಗ ಬಳಿಯ ಶ್ರೀ ಚಂಡಿಕಾ ಪರಮೇಶ್ವರಿ ದೇವಿ ದೇವಸ್ಥಾನದ ಜೀರ್ಣೋದ್ಧಾರ ದ ವಿಜ್ಞಾಪನ ಪತ್ರ ಬಿಡುಗಡೆ...

ಬಿಸಿ ರೋಡ್ : ಮಂಗಳೂರಿನ ಬಿಸಿ ರೋಡ್ ಬಳಿಯ ಜೋಡುಮಾರ್ಗ ಹೆದ್ದಾರಿ ಸಮೀಪದ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದ ಜೀರ್ಣೋದ್ದಾರದ ವಿಜ್ಞಾಪನಾ ಪತ್ರ ಬಿಡುಗಡೆಯ ಕಾರ್ಯಕ್ರಮ 11/10/2022 ರ ರವಿವಾರದಂದು ನಡೆಯಿತು...

 

ಜೀರ್ಣೋದ್ಧಾರ ಕಾರ್ಯದ ಮುಂದಿನ ಕೆಲಸದ ಬಗ್ಗೆ ದೇವಸ್ಥಾನದ ತಂತ್ರಿಗಳಾದ ನೀಲೇಶ್ವರ್ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಸಮಾಲೋಚಿಸಲಾಯಿತು.... ಮೊದಲಾಗಿ ನೀಲೇಶ್ವರ ತಂತ್ರಿಗಳು ಮುಂದೆ ನಡೆಯುವ ದೇವಸ್ಥಾನದ ಕೆಲಸದ ಬಗ್ಗೆ ಶುಭ ಹಾರೈಸಿದರು...

ಇದೇ ಸಂದರ್ಭ ಮಾತನಾಡಿದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಇಂಟೆಕ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಮಲ್ಲಿ, ಪಕ್ಷ ಭೇದ ಮರೆತು ದೇವಸ್ಥಾನದ ಅಭಿವೃದ್ದಿಗೆ ಸಹಕರಿಸಬೇಕಾಗಿ ಮನವಿ ಮಾಡಿಕೊಂಡರು...

 

ಈ ಸಭೆಯಲ್ಲಿ ಮಾಜಿ ಸಚಿವ ರಮಾನಾಥ್ ರೈ, ಪ್ರಮುಖರಾದ ರಘುನಾಥ್ ಸೋಮಿಯಾಜಿ, ನೀಲೇಶ್ವರ ಪದ್ಮನಾಭ ತಂತ್ರಿ ಮತ್ತು ದೇವಸ್ಥಾನದ ಸಮಿತಿ ಅಧ್ಯಕ್ಷರಾದ ಲೋಕನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು...


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!