ಗುರುಪುರ ವಜ್ರದೇಹಿ ಮಠದಲ್ಲಿ ಪುಣ್ಯಸ್ಮರಣೆ ಮತ್ತು ಅನ್ನದಾನದ ವ್ಯವಸ್ಥೆ...
ಮಂಗಳೂರು : ಸುರತ್ಕಲ್ ನ ವಿಶ್ವ ಹಿಂದೂ ಪರಿಷತ್ ನ ಮಾಜಿ ಕಾರ್ಯಾಧ್ಯಕ್ಷರಾದ ದಿ.ಐ ವೇಣುಗೋಪಾಲ್ ಸುರತ್ಕಲ್ ಅವರ 5ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಹನುಮ ಬಾಲ ಸಂರಕ್ಷಣಾ ಆಶ್ರಮದ ಮಕ್ಕಳಿಗೆ ವಿಶ್ವ ಹಿಂದೂ ಪರಿಷತ್ ಸುರತ್ಕಲ್ ವತಿಯಿಂದ ಭೋಜನದ ವ್ಯವಸ್ಥೆ ಮಾಡಲಾಯಿತು...
ದಿ.ಐ ವೇಣುಗೋಪಾಲ್ ಅವರು 1990ರ ದಶಕದಲ್ಲಿ ಹಿಂದೂ ಜಾಗರಣ ವೇದಿಕೆ ಸಂಘಟನೆಯ ಸ್ಥಾಪಿತರಲ್ಲಿ ಇವರು ಒಬ್ಬರು. ಅಯೋಧ್ಯೆಯ ಗಲಭೆಯ ವಿಚಾರದಲ್ಲೂ ಸುರತ್ಕಲ್ ವಿಭಾಗದಲ್ಲಿ ಮುಂಚೂಣಿಯಲ್ಲಿದ್ದು ಅದರ ನಾಯಕತ್ವ ವಹಿಸಿದ್ದರು... ಸುರತ್ಕಲ್ ಪರಿಸರದಲ್ಲಿ ನಡೆದ ಕೋಮು ಗಲಭೆಯ ಸಂಧರ್ಭ ಕೂಡ ಯುವಕರನ್ನು ಒಗ್ಗೂಡಿಸಿ, ಯುವಕರ ಕಷ್ಟಕ್ಕೆ ಸ್ಪಂದಿಸಿದರು.. ಸಾಮಾಜಿಕ ಕಾರ್ಯದಲ್ಲಿ ಸುರತ್ಕಲ್ ಪರಿಸರದಲ್ಲಿ ಮುಂಚೂಣಿಯಲ್ಲಿಯಲ್ಲಿದ್ದರು.
ಈ ಸಂದರ್ಭದಲ್ಲಿ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ,
ದಿ.ವೇಣುಗೋಪಾಲ್ ಅವರನ್ನು ಸ್ಮರಿಸಿ ಅವರ ಅದರ್ಶದ ಜೀವನದ ಬಗ್ಗೆ ತಿಳಿಸಿದರು..
Comments
0 comment