ಉಡುಪಿ: ಮಣಿಪಾಲದಲ್ಲಿ ಅನೈತಿಕ ಚಟುವಟಿಕೆ ಹೆಚ್ಚಾಗಿ ಬೆಳಕಿಗೆ ಬರುತ್ತಿರುವ ಹಿನ್ನಲೆ ಇದರ ವಿರುದ್ಧ ತಕ್ಷಣ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದು ಪರಿಷದ್ ಬಜರಂಗದಳ ಆಗ್ರಹ ಮಾಡಿದೆ.
ಶೈಕ್ಷಣಿಕ ಕ್ಷೇತ್ರ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ರಾತ್ರಿ ಇಡೀ ಕಾರ್ಯಾಚರಿಸುತ್ತಿದ್ದ ಬಾರ್, ಮತ್ತು ಪಬ್ ಗಳ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದು ಶ್ಲಾಘನೀಯ.
ಆದೇ ರೀತಿ ಮಣಿಪಾಲದ ಕೆಲವು ಕಡೆ ಹೋಟೆಲ್ (spice and ice, hot and spicy,planet cafe,)ಸ್ಪೈಸ್ ಅಂಡ್ ಐಸ್, ಹಾಟ್ ಅಂಡ್ ಸ್ಪೈಸಿ, ಪ್ಲಾನೆಟ್ ಕೆಫೆ, ವ್ಯಾಪಾರದ ನೆಪದಲ್ಲಿ ತಡರಾತ್ರಿ ವರೆಗೂ ವ್ಯಾಪಾರ ಮಾಡಿಕೊಂಡು ಅಲ್ಲಿ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದ್ದು ಇದರ ವಿರುದ್ಧವೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದು ಪರಿಷದ್ ಬಜರಂಗದಳ ಉಡುಪಿ ಜಿಲ್ಲೆ ಆಗ್ರಹಿಸಿದೆ.
ಸ್ಪೈಸ್ ಅಂಡ್ ಐಸ್, ಹಾಟ್ ಅಂಡ್ ಸ್ಪೈಸಿ, ಪ್ಲಾನೆಟ್ ಕೆಫೆ ಈ ಹೋಟೆಲ್ ಗಳ ಮುಂದೆ ರಾತ್ರಿಯಾಗುತ್ತಿದ್ದಂತೆ ಯುವತಿಯರ ದಂಡು ಮದ್ಯ, ಸಿಗರೇಟ್ ಸೇರಿದಂತೆ ಮಾದಕ ವಸ್ತುಗಳ ಸೇವನೆ ಮಾಡುವ ಬಗ್ಗೆಯೂ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ವಿದ್ಯಾರ್ಥಿಗಳು ನಶೆಯಲ್ಲಿ ತೇಲುತ್ತಿರುವ ದೃಶ್ಯ ಈ ಮೂರು ಹೋಟೆಲ್ ಗಳ ಮುಂದೆ ಕಾಣಸಿಗುತ್ತಿದ್ದು, ಇದರ ವಿರುದ್ಧ ವಿಶ್ವ ಹಿಂದು ಪರಿಷತ್ ಬಜರಂಗದಳ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಶನಿವಾರದಂದು ಹಲವು ಪಬ್ ಗಳ ವಿರುದ್ಧ ಕಾರ್ಯಾಚರಣೆಗೆ ಇಳಿದ ಪೊಲೀಸ್ ಇಲಾಖೆ ದಾಳಿ ನಡೆಸಿ ಕ್ರಮ ಕೈಗೊಂಡಿದೆ. ಆದರೆ ಮಣಿಪಾಲದಲ್ಲಿ ಹಲವು ಕಡೆಗಳಲ್ಲಿ ವ್ಯಾಪಾರದ ನೆಪದಲ್ಲಿ ಅಕ್ರಮ ಚಟುವಟಿಕೆ ಹೆಚ್ಚಾಗಿ ನಡೆಯುತ್ತಿದೆ. ಇದರಿಂದ ಉಡುಪಿಗೆ ಕೆಟ್ಟ ಹೆಸರು ಬರುವ ಮೊದಲು ಪೊಲೀಸ್ ಇಲಾಖೆ ಕ್ರಮ ಜರುಗಿಸುವ ಅಗತ್ಯತೆ ಇದೆ.
Comments
0 comment