ಮಂಗಳೂರು: ಅಕ್ರಮ ಮರಳು ಸಾಗಾಟ - ಲಾರಿ ವಶಕ್ಕೆ.!
ಮರಳು ಸಾಗಾಟ - ಪೊಲೀಸ್ ರೈಡ್ - ಚಾಲಕ ಪರಾರಿ

ಮಂಗಳೂರು: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಲಾರಿ ಸಹಿತ ಮರಳನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಜ್ಪೆ: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್ ಲಾರಿಗಳು ಪೊಲೀಸ್ ವಶ

ಬಜ್ಪೆ ಪೊಲೀಸ್‌ ಠಾಣೆಯ ಪಿಎಸ್ಸೈ ಗುರುವಪ್ಪ ಕಾಂತಿ ಅವರು ಅ.11ರಂದು ರಾತ್ರಿ ಗಸ್ತಿನಲ್ಲಿದ್ದ ಸಂದರ್ಭ ಲಾರಿಯೊಂದರಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾಗ. ಈ ವೇಳೆ ಲಾರಿಯನ್ನು ಅಡ್ಡ ಹಾಕಿ ನಿಲ್ಲಿಸಿದಾಗ ಚಾಲಕ ಲಾರಿಯಿಂದ ಇಳಿದು ಪರಾರಿಯಾಗಿ ದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

ಈ ಸಂದರ್ಭ ಒಂದು ಲಾರಿ, ಅದರಲ್ಲಿದ್ದ ಸುಮಾರು 1ಯೂನಿಟ್‌ ನಷ್ಟು ಮರಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಲಾರಿಯ ಚಾಲಕ ಮತ್ತು ಮಾಲಕನ ಮೇಲೆ ಅಕ್ರಮ ಮರಳು ಸಾಗಾಟದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!