ಸಾಕಿದ ಕರುವನ್ನು ಮಾಂಸಕ್ಕಾಗಿ ವಧೆಗೈದ ಶೀನ, ಗಜೇಂದ್ರ ಅರೆಸ್ಟ್
ಕುಂದಾಪುರ: ಮಾಂಸಕ್ಕಾಗಿ ಸಾಕಿದ ಕರುವನ್ನು ವಧೆ ಮಾಡಿದ ಘಟನೆ ನಾಡಾ ಗ್ರಾಮದ ಬಳಿ ನಡೆದಿದ್ದು. ಮಾಂಸ ಮಾಡುತ್ತಿದ್ದ ಇಬ್ಬರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬ0ಧಿತ ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ಶೀನ ಹಾಗೂ ಗಜೇಂದ್ರ ಎಂದು ಗುರುತಿಸಲಾಗಿದೆ.
ಅ.11ರಂದು ಸಂಜೆ ಸುಧೀರ್ ಎಂಬಾತನ ಜೊತೆಗೆ ಸೇರಿ ತಾವು ಸಾಕಿದ ಗಂಡು ಕರುವನ್ನು ವಧೆ ಮಾಡಿರುವುದಾಗಿ ವಿಚಾರಣೆ ಸಂದರ್ಭ ಆರೋಪಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿದ್ದ ಜಾನುವಾರಿನ ಮಾಂಸ, ದೇಹದ ಭಾಗಗಳು, ಪಾಲಿಥಿನ್ ಚೀಲ, ಕಬ್ಬಿಣದ ಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
0 comment