ಉಡುಪಿ: ಚಿನ್ನದ ಸರ ಎಗರಿಸಿದ ಕಳ್ಳರು - ಬೆನ್ನಟ್ಟಿ ಹಿಡಿದ ಆಟೋ ಚಾಲಕರು.!!
ಕಳ್ಳರ ಜಾಡು ಹಿಡಿದು ಬೆನ್ನಟ್ಟಿ ಬಂದ ಅಟೋ ಚಾಲಕರ ತಂಡ

ಉಡುಪಿ: ತೆಕ್ಕಟ್ಟೆಯ ಹೈಕಾಡಿ ಎಂಬಲ್ಲಿ ಚಿನ್ನದ ಸರಕ್ಕೆ ಬಣ್ಣ ಹಾಕಿ ಕೊಡುವ ನೆಪದಲ್ಲಿ ‌ಮಹಿಳೆಯ ಚಿನ್ನದ ಸರವನ್ನು  ಎಗರಿಸಿ ಕಳ್ಳರ ತಂಡವೊಂದು ಅಟೋ ರಿಕ್ಷಾದಲ್ಲಿ ಪರಾರಿಯಾಗಿದ್ದು, ಬಿದ್ಕಲ್ ಕಟ್ಟೆ ಪ್ರಮುಖ ಸರ್ಕಲ್ ಇಳಿದು ಬೇರೊಂದು ರಿಕ್ಷಾದಲ್ಲಿ ಪರಾರಿಯಾಗಿದ್ದು ಸಂಶಯಗೊಂಡ   ಅಟೋ ಚಾಲಕರು ಕಳ್ಳರ ಜಾಡು ಹಿಡಿದು ಬೆನ್ನಟ್ಟಿದ ಘಟನೆ ಬೆಳಗ್ಗೆ ಗಂಟೆ 10.55 ರ ಸುಮಾರಿಗೆ ಸಂಭವಿಸಿದೆ.

ಎರಡು ಅಟೋ ರಿಕ್ಷಾವನ್ನು ಬದಲಿಸಿದ ಕಳ್ಳರು: ಹಿಂದಿ ಭಾಷೆಯಲ್ಲಿ ವ್ಯವಹರಿಸುವ ತಂಡ ಹೈಕಾಡಿಯಿಂದ ಕಕ್ಕುಂಜೆ ಕ್ರಾಸ್ ಅಲ್ಲಿಂದ ಬಿದ್ಕಲ್ ಕಟ್ಟೆ ಬಂದಿಳಿದು ನಂತರ ಹುಣ್ಸೆಮಕ್ಕಿ ಕಡೆಗೆ ಅಟೋದಲ್ಲಿ ಸಾಗಿದ್ದಾರೆ.

ಸಿಸಿ ಕೆಮರಾ ದಲ್ಲಿ ಸೆರೆ: ಅಟೋದಿಂದ ಬಿದ್ಕಲ್ ಕಟ್ಟೆ ಬಸ್ ಸ್ಟ್ಯಾಂಡ್ ನಲ್ಲಿ ಇಳಿದು ಮತ್ತೊಂದು ಅಟೋದಲ್ಲಿ ಇಬ್ಬರು ವ್ಯಕ್ತಿಗಳು ತೆರಳುವ ದೃಶ್ಯ ಗಳು  ಸಿಸಿ‌ ಕೆಮರಾದಲ್ಲಿ ಸೆರೆಯಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!