ಕಾರ್ಕಳ: ನಕಲಿ ನಂಬರ್ ಪ್ಲೇಟ್ ಅಳವಡಿಸಿ, ಯಾವುದೋ ವಂಚನೆ ಪ್ರಕರಣಕ್ಕೆ ಪ್ರಯತ್ನಿಸುತ್ತಿದ್ದ ಆರೋಪಿ ಕಾರ್ಕಳ ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ನಿಟ್ಟೆ ಗ್ರಾಮದ ನಿವಾಸಿ ಉಮ್ಮರ್ ಫಾರೂಕ್ ಬಂಧಿತ ಆರೋಪಿಯಾಗಿದ್ದು. ಆತ ಮಂಗಳೂರಿನ ಧೀರಾಜ್ ಮತ್ತು ಪ್ರೀತಮ್ ಎಂಬವರೊಂದಿಗೆ ಸೇರಿಕೊಂಡು ಸುಜುಕಿ ಬಲೆನೋ ಎಂಬ ಕಾರಿನ ಮುಂಬೈ ನೋಂದಾವಣೆಯನ್ನು ಮಂಗಳೂರು ನೋಂದಾವಣೆ ಎಂದು ಬದಲಾಯಿಸಿ, ಕಾರಿಗೆ ಟಿಂಟ್ ಅಳವಡಿಸಿಕೊಂಡು ಹೋಗುತ್ತಿದ್ದ ಸಂದರ್ಭ ಪೊಲೀಸರು ಬಂಧಿಸಿದ್ದಾರೆ.
ಕಾರಿನ ಮಾಲಿಕನಿಗೆ ವಂಚಿಸುವ ಹಾಗೂ ಬೇರೆ ಯಾವುದೋ ದುರುದ್ದೇಶ ಈ ಕೃತ್ಯದ ಹಿಂದೆ ಅಡಗಿರುವ ಕುರಿತು ಪ್ರಕರಣ ದಾಖಲಾಗಿದೆ.
ಆರೋಪಿ ಉಮ್ಮರ್ ಫಾರೂಕ್ ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಬೆಳ್ಮಣ್ ನ ಗೋವಿಂದ್ ಎಂಬವರಿಗೆ ವ್ಯವಹಾರ ವಿಚಾರವಾಗಿ ಮಾರಣಾಂತಿಕ ಹಲ್ಲೆ ಮಾಡಿದ ವಿಚಾರವಾಗಿ ಪಡುಬಿದ್ರೆ ಪೊಲೀಸ್ ಸ್ಟೇಶನ್ ನಲ್ಲಿ ಫಾರೂಕ್ ವಿರುದ್ಧ ಪ್ರಕರಣ ದಾಖಲಾಗಿತ್ತು, ಮತ್ತು ಇತ್ತೀಚೆಗೆ ಜಬ್ಬರ್ ಎಂಬಾತನನ್ನು ಕಿಡ್ನಾಪ್ ಮಾಡಿದ ವಿಚಾರದಲ್ಲಿ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇತ್ತೀಚಿನ ಮಾಹಿತಿ ಪ್ರಕಾರ ಡ್ರಗ್ಸ್ ಮಾರಾಟ ದಂಧೆಯಲ್ಲೂ ಈತನ ಕೈವಾಡವಿದೆ ಎಂಬ ಗುಮಾನಿ ಹರಿದಾಡುತ್ತಿದೆ. ಈ ಹಿಂದೆ ಹಿಂದೂ ಯುವತಿಯನ್ನು ಲವ್ ಜಿಹಾದ್ ಬಲೆಗೆ ಬೀಳಿಸಿದ್ದ ಎನ್ನುವ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಮತ್ತು ಈತನ ಅಕ್ರಮ ಕೋರೆಗಳ ದಂಧೆ ಕಾರ್ಕಳ ಭಾಗದಲ್ಲಿ ಬಹುದೊಡ್ಡ ಮಟ್ಟದಲ್ಲಿ ಸಾಗುತ್ತಿದೆ. ಈತನ ಕೋರೆ ಒಂದರಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮುಸ್ಲಿಂ ವ್ಯಕ್ತಿ ಹಲವು ಹಿಂದೂ ಹುಡುಗಿಯರನ್ನು ಲವ್ ಜಿಹಾದ್ ಬಲೆಗೆ ಕೆಡವಿದ್ದ ಎಂಬುದು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸದ್ಯ ಈತ ಪೊಲೀಸರ ಬಲೆಗೆ ಬಿದ್ದಿದ್ದು, ಈತನ ಅಸಲಿ ಮುಖ ಬಯಲಾಗಲಿದೆ.
Comments
0 comment