ಡಿವೈಡರ್ ಮೇಲೆ ಕುಳಿತಿದ್ದವರ ಮೇಲೆ ಹರಿದ ವಾಹನ -  ನಾಲ್ವರು ಸ್ಥಳದಲ್ಲೇ ಸಾವು
ಡಿವೈಡರ್ ಮೇಲೆ ಕುಳಿತಿದ್ದವರ ಮೇಲೆ ಹರಿದ ವಾಹನ - ನಾಲ್ವರು ಸ್ಥಳದಲ್ಲೇ ಸಾವು

ವಿಜಯಪುರ: ನಗರದ ಹೊರಭಾಗದಲ್ಲಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಸ್ಥಳದಲ್ಲೇ ನಾಲ್ವರು ಸಾವಿಗೀಡಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 50 ರಲ್ಲಿನ ಟೋಲ್ ಗೇಟ್ ಬಳಿಯ ಟ್ರಕ್ ಬೈಲೈನ್ ಬಳಿ ದುರ್ಘಟನೆ ನಡೆದಿದೆ. ಟ್ರಕ್ ಬೈಲ್ ಬಳಿಯ ಸರ್ವಿಸ್ ರಸ್ತೆಯ ಡಿವೈಡರ್ ಮೇಲೆ ಕುಳಿತಿದ್ದ ನಾಲ್ವರ ಮೇಲೆ ಅಪರಿಚಿತ ವಾಹನ ಹರಿದು ಪರಾರಿಯಾಗಿದೆ.

ಘಟನೆಯಲ್ಲಿ ಶಿವಾನಂದ ಚೌಧರಿ (25), ಸುನೀಲ್ ಖಾನಾಪೂರ (26), ಈರಣ್ಣ ಕೋಲಾರ (26) ಹಾಗೂ ಪ್ರವೀಣ್ ಪಾಟೀಲ್ (30) ಮೃತಪಟ್ಟಿದ್ದಾರೆ. ಮೃತರೆಲ್ಲರೂ ವಿಜಯಪುರ ನಗರದ ವಜ್ರ ಹನುಮಾನ್ ನಗರದ ವಾಸಿಗಳು.

ಅಪರಿಚಿತ ವಾಹನ ನಾಲ್ವರ ಮೇಲಲ್ಲದೇ ಅವರ ಬೈಕ್‌ಗಳ ಮೇಲೂ ಹರಿದಿದೆ. ಇದರಿಂದ 2 ಬೈಕ್‌ಗಳು ನಜ್ಜುಗುಜ್ಜಾಗಿವೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ವಿಭಾಗದ ಡಿವೈಎಸ್‌ಪಿ ಗಿರಿನಲ್ಲ ತಳಕಟ್ಟಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 



You may also like

Comments

https://newsdaksha.online/assets/images/user-avatar-s.jpg

0 comment

Write the first comment for this!