ಆರೋಪಿಗಳಿಗೆ ಜಾಮೀನು ರದ್ದು ಮಾಡಿದ್ದ ಮೂಡಬಿದಿರೆ ಕೋರ್ಟ್ - ಬಿಡುಗಡೆಗೊಳಿಸಿದ ಮಂಗಳೂರು ಕೋರ್ಟ್.!?
ಮೂಡಬಿದಿರೆ ನ್ಯಾಯಾಲಯ ಜಾಮೀನು ರದ್ದು ಮಾಡಿದ್ದ ಆದೇಶಕ್ಕೆ ಮಂಗಳೂರು ಕೋರ್ಟ್ ತಡೆ

ಮಂಗಳೂರು: ಮೂಡಬಿದ್ರಿ ಜೆ.ಎಮ್.ಎಫ್.ಸಿ ನ್ಯಾಯಾಲಯ ಆರೋಪಿಗಳಿಬ್ಬರ ಜಾಮೀನು ರದ್ದತಿ ನೀಡಿ ಹೊರಡಿಸಿದ್ದ ಆದೇಶ ತಡೆಹಿಡಿದ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆರೋಪಿಗಳನ್ನು ಬಿಡುಗಡೆಗೊಳಿಸಿದ ಘಟನೆ ನಡೆದಿದೆ.

ಮೂಲ್ಕಿ ಪೋಲಿಸ್ ಠಾಣೆಯಲ್ಲಿ ಅಪರಾಧ ಕ್ರಮ ಸಂಖ್ಯೆ 53/2023ರಲ್ಲಿ ಯತಿನ್ ಕುಮಾರ್ ಮತ್ತು ರಾಜೇಶ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರಿಗೆ ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಆರೋಪಿಗಳಾದ ಯತಿನ್ ಕುಮಾರ್ ಮತ್ತು ರಾಜೇಶ್‌ರ ಜಾಮೀನನ್ನು ರದ್ದತಿ ಮಾಡಿ ಮೂಡಬಿದ್ರಿಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಆದೇಶಿಸಿತ್ತಲ್ಲದೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳಿಬ್ಬರು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯಕ್ಕೆ ಪರಿಷ್ಕರಣೆ ಅರ್ಜಿಯ ಮುಖಾಂತರ ಮೂಡಬಿದ್ರಿಯ ಜೆ.ಎಮ್.ಎಫ್.ಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಂಗಳೂರು ಕೋರ್ಟ್ ಮೊರೆ ಹೋಗಿದ್ದರು .

ಅರ್ಜಿಯನ್ನು ಪರಿಶೀಲಿಸಿ ದೂರುದಾರರ ಪರ ಮತ್ತು ವಿರೋಧ ವಾದ ಆಲಿಸಿದ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಹೊಂದಿದ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಹೆಚ್.ಎಸ್. ರವರು ಮೂಡಬಿದ್ರಿಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಹೊರಡಿಸಿದ್ದ ಜಾಮೀನು ರದ್ದತಿ ಆದೇಶ ತಡೆ ಹಿಡಿದು ಅರೋಪಿಗಳನ್ನು ಬಿಡುಗಡೆಗೊಳಿಸುವಂತೆ ಮಧ್ಯಂತರ ಆದೇಶ ನೀಡಿದ್ದಾರೆ. ದೂರುದಾರರ ಪರ ಯುವ ನ್ಯಾಯವಾದಿ ಶಿವಾನಂದ ಎಮ್. ವಿಟ್ಲ ವಾದ ಮಂಡಿಸಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!