ಉಡುಪಿ: ಚುನಾವಣೆ ಹಿನ್ನಲೆ - 9 ಮಂದಿ ವಿರುದ್ಧ ಗಡಿಪಾರು ಆದೇಶ.!
ರೌಡಿಶೀಟರ್ ಗಳ ಗಡಿಪಾರಿಗೆ ಆದೇಶ

ಉಡುಪಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ 9 ಮಂದಿ ರೌಡಿಶೀಟರ್ ಗಳ ಗಡಿಪಾರಿಗೆ ಆದೇಶ ಹೊರಡಿಸಲಾಗಿದೆ.

ಉಡುಪಿ ಉಪವಿಭಾಗಧಿಕಾರಿ ರಶ್ಮಿ ಅವರು ಗಡಿಪಾರು ಆದೇಶ ಮಾಡಿದ್ದಾರೆ. ಚುನಾವಣೆಯ ಮುನ್ನೆಚ್ಚರಿಕಾ ಕ್ರಮ ಹಾಗೂ ಚುನಾವಣೆ ನಡೆಸುವ ಸಲುವಾಗಿ ಈ ಕ್ರಮ ಜರಗಿಸಲಾಗಿದೆ.

ರಾಘವೇಂದ್ರ ದೇವಾಡಿಗ, ಅಭಿಷೇಕ್ ಶ್ರೀಯಾನ್ ಕಾಪು, ರಂಜಿತ್ ಪೂಜಾರಿ, ಮಹೇಶ್ ಗಾಣಿಗ, ಹರೀಶ್ ಪೂಜಾರಿ ಮಣಿಪಾಲ, ರಂಜಿತ್ ಯಾನೆ ರಂಜಿತ್ ಕಲ್ಮಾಡಿ, ಇನ್ಸಾಲ್ ಮಣಿಪಾಲ, ರೋಹಿತ್ ಕೋಟ, ಮೊಹಮ್ಮದ್ ರಶೀದ್- ಗಡಿಪಾರಾದ ರೌಡಿಶೀಟರ್ ಗಳಾಗಿದ್ದಾರೆ. ಇವರೆಲ್ಲ ಉಡುಪಿಯ ನಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣಗಳಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಜೂನ್ 10 ರವರೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!