ಸಲಾರ್ ಅಬ್ಬರದ ನಡುವೆ ಬೇಸರದ ವಿಷಯ ಹಂಚಿಕೊಂಡ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್
ಸಲಾರ್ ಅಬ್ಬರದ ನಡುವೆ ಬೇಸರದ ವಿಷಯ ಹಂಚಿಕೊಂಡ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್

ಸ್ಯಾಂಡಲ್​ವುಡ್​ ಸ್ಟಾರ್ ಡೈರೆಕ್ಟರ್​ ಪ್ರಶಾಂತ್ ನೀಲ್ ಕೆಜಿಎಫ್​, ಸಲಾರ್ ಮೂವಿಗಳಿಂದ ಪರಿಚಿತರು. ಒಂದು ಸಮಯದಲ್ಲಿ ತಾವು ನಿರ್ದೇಶನ ಮಾಡಿದ್ದ ಉಗ್ರಂ ಮೂವಿ ಸರಿಯಾಗಿ ತೆರೆ ಕಂಡಿಲ್ಲವೆಂದು ಅದೇ ಥೀಮ್ ಇಟ್ಟುಕೊಂಡು ತೆಲುಗಿನ ಸ್ಟಾರ್​ ಆ್ಯಕ್ಟರ್​ ಡಾರ್ಲಿಂಗ್​ ಪ್ರಭಾಸ್ ಜೊತೆಗೂಡಿ ಸಲಾರ್ ಕೇಸ್​ಫೈರ್​ ಮಾಡಿದ್ದಾರೆ.

ಸಲಾರ್​ ಚಿತ್ರ ಥಿಯೇಟರ್​​ಗಳಲ್ಲಿ ಸಖತ್ ಸೌಂಡ್ ಮಾಡುವ ಜೊತೆಗೆ ಬಾಕ್ಸ್​ ಆಫೀಸ್​ನಲ್ಲಿ ಬಿಗ್ ಕಲೆಕ್ಷನ್ ಮಾಡುತ್ತಿದೆ. ಪ್ರಶಾಂತ್ ನೀಲ್ ಅವರು ಸಿನಿಮಾ ಡೈರೆಕ್ಟ್ ಮಾಡುವಾಗ ಮಕ್ಕಳು ಅತ್ತರೆ 3 ತಿಂಗಳಿಗೊಮ್ಮೆ ಮನೆಗೆ ಹೋಗಿ ಮೀಟ್​ ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. 

ಸಿನಿಮಾಗಳನ್ನು ಮಾಡುವುದು ಒಪ್ಪಿಕೊಂಡರೆ ಅದೊಂದು ಸಾಹಸದ ಕೆಲಸ. ಬ್ಯುಸಿ ಶೆಡ್ಯೂಲ್ಡ್​ನಲ್ಲಿ ಸೆಟ್​ಗಳಲ್ಲಿ ಶೂಟಿಂಗ್​ ಕಾರ್ಯ ನೋಡಿಕೊಳ್ಳಬೇಕು. ಈ ವೇಳೆ ನನ್ನ ಕುಟುಂಬ ಹಾಗೂ ಮಕ್ಕಳನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೆ. ಒಮ್ಮೆ ಮೂವಿ ಶೂಟಿಂಗ್ ಎಂದು ಬಂದರೆ 3 ತಿಂಗಳಾದ್ರೂ ಮನೆಗೆ ಹೋದರೆ ಹೋಗುತ್ತಿದ್ದೆ, ಇಲ್ಲಂದರೆ ಇಲ್ಲ. ಅದು ನನ್ನ ಮಕ್ಕಳು ಅತ್ತರೆ ಅವರನ್ನು ಭೇಟಿ ಮಾಡಲು ಸಮಯ ಬಿಡುವು ಮಾಡಿಕೊಂಡು ಹೋಗುತ್ತಿದೆ. ಶೂಟಿಂಗ್ ನನ್ನ ವೈಯಕ್ತಿಕ ಜೀವನದ ಮೇಲೆ ಸಾಕಷ್ಟು ಪರಿಣಾಮ ಬಿರುತ್ತಿತ್ತು. ಹೀಗಾಗಿ ಸಿನಿಮಾಕ್ಕಾಗಿ ನಾನು ಎಲ್ಲ ತ್ಯಾಗ ಮಾಡಿದ್ದೇನೆ. ಸಿನಿಮಾದಿಂದ ಹೊರ ಬರಲು ಬಯಸುತ್ತೇನೆ ಎಂದಿದ್ದಾರೆ.

ಸಿನಿಮಾ ಶೂಟಿಂಗ್​​ನಿಂದಾಗಿ ನನ್ನ ಮಕ್ಕಳಿಗೆ ಸಾಕಷ್ಟು ಸಮಯ ಕೊಡಲು ಆಗುತ್ತಿರಲಿಲ್ಲ. ನನ್ನ ಮಕ್ಕಳು ಅಳುತ್ತಿದ್ದರೆ ಅದು 3 ತಿಂಗಳಿಗೊಮ್ಮೆ ಅವರನ್ನು ಭೇಟಿ ಮಾಡಲು ಹೋಗುತ್ತಿದೆ. ಇದು ನನಗೆ ತುಂಬಾ ನೋವು ಕೊಡುತ್ತಿತ್ತು. ಶೂಟಿಂಗ್​​ ಮಾಡುವುದು ವೈಯಕ್ತಿ ಜೀವನದ ಮೇಲೆ ಪರಿಣಾಮ ಬೀರುತ್ತಿತ್ತು. ಆದರೂ ಅದನ್ನು ನಾನು ಒಪ್ಪಿಕೊಂಡು ಮಾಡಬೇಕಾಗುತ್ತದೆ. 

ಕೆಜಿಎಫ್​ ಸಿನಿಮಾ ಮುಗಿದ ಮೇಲೆ ಸಡನ್ ಆಗಿ ಸಲಾರ್ ಮೂವಿ ಮಾಡಲು ಶುರು ಮಾಡಿದೆ. ಇದರಿಂದ ನಾನು ಹೆಚ್ಚು ಸಮಯ ಕುಟುಂಬಕ್ಕೆ ಕೊಡಲು ಆಗಲ್ಲ ಎಂಬುದು ಗೊತ್ತಿತ್ತು. ಮಕ್ಕಳಿಂದಲೂ ದೂರ ಉಳಿಯಬೇಕಾಯಿತು. ಇದರಿಂದ ನಾನೊಬ್ಬ ಒಳ್ಳೆಯ ತಂದೆ, ಗಂಡ, ಮಗ, ಸಹೋದರ, ಗೆಳೆಯ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!