ಮತ್ತೆ ಝೀ ಕನ್ನಡದಲ್ಲಿ ಬರುತ್ತಿದೆ ಬ್ರಹ್ಮಗಂಟು
ಅಕ್ಕನಿಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟ ತಂಗಿಯ ಕತೆ. ರ‍್ತಿದೆ ಹೊಸ ಧಾರಾವಾಹಿ "ಬ್ರಹ್ಮಗಂಟು"

ಕಿರುತೆರೆ ಲೋಕದಲ್ಲಿಯೇ ಸದಾ ಭಿನ್ನ ಪ್ರಯೋಗಗಳಿಂದಲೇ ಜನರ ಮನಸ್ಸನ್ನು ಗೆದ್ದಿರುವ ಝೀ ಕನ್ನಡ ಚಾನೆಲ್‌ನಲ್ಲಿ ಮತ್ತೆ ಹೊಸ ಸೀರಿಯಲ್ ಬರಲು ತಯಾರಾಗುತ್ತಿದೆ. ಸದ್ಯ ಝೀ ಕನ್ನಡದಲ್ಲಿ ಪಾರು ಹಾಗೂ ಹಿಟ್ಲರ್ ಕಲ್ಯಾಣಕ್ಕೆ ತೆರೆಬಿದ್ದಿದೆ. ಈ ವಾರವಷ್ಟೇ ಹೊಸ ಸೀರಿಯರ್ ಶ್ರಾವಣಿ ಸುಬ್ರಹ್ಮಣ್ಯ ಪ್ರಾರಂಭವಾಗಿದೆ. ಈ ನಡುವೆ ಮತ್ತೊಂದು ಕೌಟುಂಬಿಕ ಧಾರವಾಹಿ ತೆರೆಗೆ ಬರಲಿದೆ.

 ಹೌದು. ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ಝೀ ಕನ್ನಡ ವಿಡಿಯೋ ಪೋಸ್ಟ್ ಹಾಕಿದೆ. ಬ್ರಹ್ಮಗಂಟು ಅನ್ನುವ ಅಕ್ಕ ತಂಗಿ ಸಂಬ0ಧದ ಕಥಾಹಂದರವುಳ್ಳ ಧಾರವಾಹಿ ಶೀಘ್ರದಲ್ಲಿಯೇ ಪ್ರಸಾರ ಆಗಲಿದೆ ಎಂದು ತಿಳಿಸಿದ್ದಾರೆ. 

ಈ ಹಿಂದೆ ಗೀತಾ ಭಾರತಿ ಭಟ್ ಅಭಿನಯದ, ವಿಶೇಷ ಕಥೆಯಿದ್ದ ಧಾರವಾಹಿ ಬ್ರಹ್ಮಗಂಟು ಕನ್ನಡಿಗರ ಮನಸೂರೆಗೊಳಿಸಿತ್ತು. ಈ ಮತ್ತೆ ಅದೇ ಶೀರ್ಷಿಕೆಯಡಿಯಲ್ಲಿ ಬೇರೆ ರೀತಿಯಾಗಿಯೆ ಕಥೆಹೆಣೆದು ಕನ್ನಡಿಗರ ಮುಂದೆ ಬರುತ್ತಿದೆ ಬ್ರಹ್ಮಗಂಟು ತಂಡ. ಈಗಾಗಲೇ ಪ್ರೊಮೊ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸೀರಿಯಲ್ ನಲ್ಲಿ ಝೀ ಕನ್ನಡದ ಜೊತೆ ಜೊತೆಯಲಿ, ಹಿಟ್ಲರ್ ಕಲ್ಯಾಣದಲ್ಲಿ ಬಣ್ಣ ಹಚ್ಚಿದ್ದ ಕಲಾವಿದರು ಇರಲಿದ್ದಾರೆ. 

ಸೂಪರ್ ಹಿಟ್ ಧಾರವಾಹಿಗಳ ಹೆಸರು..!

ಝೀ ಕನ್ನಡದಲ್ಲಿ ಈ ಹಿಂದೆ ಇದ್ದ ಶೀರ್ಷಿಕೆಯನ್ನೇ ಮತ್ತೆ ಬಳಸಿ ಯಶಸ್ವಿಯಾಗಿತ್ತು. ಈಗ ಮತ್ತದೇ ಪ್ಲಾö್ಯನ್ ಮಾಡುತ್ತಿದೆ. ಶ್ರೀರಸ್ತು ಶುಭಮಸ್ತು, ಜೊತೆ ಜೊತೆಯಲಿ, ರಾಧಾ ಕಲ್ಯಾಣ ಹೀಗೆ ರಿಪೀಟ್ ಟೈಟಲ್ ಮೂಲಕ ಝೀ ವಾಹಿನಿ ಜನರನ್ನು ತನ್ನತ್ತ ಸೆಳೆಯುವಂತೆ ಮಾಡಿತ್ತು.

ಸದ್ಯ ಝೀ ಕನ್ನಡಲ್ಲಿ ಲಕ್ಷ್ಮೀ ನಿವಾಸ ಒಂದು ಗಂಟೆಗಳ ಸಂಚಿಕೆ ಪ್ರಸಾರ ಆಗುತ್ತಿದೆ. ಆ ನಂತರ ಯಥಾ ಪ್ರಕಾರ ಅವಧಿಗೆ ಇಳಿಸಿ, ಆ ಸಮಯದಲ್ಲಿ ಬ್ರಹ್ಮಗಂಟು ಸಿರೀಯಲ್ ಪ್ರಸಾರ ಆಗಲಿದೆ ಅನ್ನುವುದು ಹಲವರ ಲೆಕ್ಕಚಾರ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!