ಕಾರ್ಗಿಲ್ ವಿಜಯ ದಿನ ಆಚರಣೆ
ಮಂಗಳೂರು: ರಾಷ್ಟ್ರಭಕ್ತ ನಾಗರಿಕ ವೇದಿಕೆ ಮಂಗಳೂರು ಇದರ ವತಿಯಿಂದ ಯುದ್ಧ ಸ್ಮಾರಕ ಕದ್ರಿ ಇಲ್ಲಿ ಕಾರ್ಗಿಲ್ ವಿಜಯ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅರ್ಹ ಸೈನಿಕರ ಕುಟುಂಬಗಳಿಗೆ ಸೈನಿಕ ನಿಧಿ ವಿತರಣೆ ಹಾಗೂ ದ.ಕ ಮಾಜಿ ಸೈನಿಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಧನಸಹಾಯ ಮಾಡಲಾಯಿತು. ಸೈನಿಕ ಕಲ್ಯಾಣ ನಿಧಿಯನ್ನು ಅರ್ಹ ಏಳು ಸೈನಿಕ ಕುಟುಂಬಗಳಿಗೆ 1,75,000 ರೂಪಾಯಿಯನ್ನು ನೀಡಿದರು...
ಗಣ್ಯರ ಉಪಸ್ಥಿತಿಯಲ್ಲಿ ಶ್ರೀಮತಿ ಹೇಮಲತಾ ಪ್ರಕಾಶ್ ಶೆಟ್ಟಿ, ಎಮಿಮ ಮಿನಿ ಗ್ರೆಟ್ಟಾ ಸೈಮಸ್ಸ್, ನಾಗೇಶ ಕೆ, ಶ್ರೀಮತಿ ಉಷಾಕಿರಣ್ w/o ಹವಾಲ್ದಾರ್ ಮುರಳೀಧರ್ , ಶ್ರೀಮತಿ ಗೀತಾ ಕುಮಾರಿ w/o ಹವಾಲ್ದಾರ್ ಹರೀಶ್ ನಾಯಕ್, ರಾಘವೇಂದ್ರ ಗಟ್ಟಿ ಇವರಿಗೆ ಸೈನಿಕ ನಿಧಿ ವಿತರಿಸಲಾಯಿತು. ಜೊತೆಗೆ ದ.ಕ ಮಾಜಿ ಸೈನಿಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಧನಸಹಾಯ ಮಾಡಿದ್ದಾರೆ... ಈ ಸಂಧರ್ಭ ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥತರಿದ್ದರು.
Comments
0 comment