ಸುರತ್ಕಲ್: ವಿಹಾರಕ್ಕೆ ಬಂದು ಸಮುದ್ರಪಾಲು, ಇಬ್ಬರ ರಕ್ಷಣೆ
ವಿಹಾರಕ್ಕೆ ಬಂದು ಸಮುದ್ರಪಾಲು, ಇಬ್ಬರ ರಕ್ಷಣೆ

ಸುರತ್ಕಲ್: ಮಲ್ಲಮಾರ್‌ ಸಮುದ್ರ ವಿಹಾರಕ್ಕೆ ಬಂದ ಮೂವರ ಪೈಕಿ ಒರ್ವ ಸಮುದ್ರಪಾಲಾಗಿದ್ದು ಇಬ್ಬರನ್ನು ಸ್ಥಳೀಯರು ರಕ್ಷಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.

ಸಮುದ್ರಪಾಲಾದದ ಯುವಕನನ್ನು ಬಾಗಲಕೋಟೆ ಮೂಲದ ಮಾಂತೇಶ್ (29) ಎಂದು ಗುರುತಿಸಲಾಗಿದೆ. ಅಕ್ಕ ಸಾವಿತ್ರಿಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಕೆಲಸಕ್ಕೆ ಹೋಗದೆ ವಿಹಾರಕ್ಕಾಗಿ ಬಂದಿದ್ದಾಗ ಈ ಘಟನೆ ನಡೆದಿದೆ.

ಸ್ನೇಹಿತ ಮಾಹಂತೇಶ್‌ ವಿಜಯಪುರ ರಕ್ಷಿಸಿ ದಡಕ್ಕೆ ಎಳೆದು ತರುತ್ತಿದ್ದಾಗ ಮತ್ತೆ ಬೃಹತ್ ಅಲೆ ಅಪ್ಪಳಿಸಿದ್ದರಿಂದ ಸಮುದ್ರದಲ್ಲಿ ಪಾಲಾಗಿದ್ದಾನೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!